Advertisement

ಅಸ್ವಸ್ಥ ಭಿಕ್ಷುಕನಿಗೆ ಕದಂಬ ಸಂಘಟನೆಯಿಂದ ಚಿಕಿತ್ಸೆ

03:05 AM Jul 05, 2018 | Karthik A |

ಕಡಬ: ಸುಮಾರು 15 ದಿನಗಳಿಂದ ಅನ್ನ, ನೀರು ಇಲ್ಲದೆ ಕಡಬದ ಕಾಲೇಜು ರಸ್ತೆಯ ಬಳಿ ಅಸ್ವಸ್ಥಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ವೃದ್ಧ ಭಿಕ್ಷುಕನನ್ನು ಕಡಬದ ಕದಂಬ ಸಾಮಾಜಿಕ ಸಂಘಟನೆಯ ಪ್ರಮುಖರು ಪಂ.ನ ನೆರವಿನೊಂದಿಗೆ ಸೋಮವಾರ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

Advertisement

ಹಲವು ವರ್ಷಗಳಿಂದ ಕಡಬ ಪೇಟೆಯಲ್ಲಿ ಭಿಕ್ಷೆ ಬೇಡುತ್ತ, ಮನೆ ಹಾಗೂ ಹೊಟೇಲ್‌ ಗ‌ಳಲ್ಲಿ ಕೊಟ್ಟ ತಿಂಡಿ ತಿನ್ನುತ್ತ ಬದುಕುತ್ತಿದ್ದ ವೃದ್ಧ ಭಿಕ್ಷುಕ ಅಸ್ವಸ್ಥನಾಗಿ ಜೀವನ್ಮರಣ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಕದಂಬ ಸಂಘಟನೆಯ ಅಧ್ಯಕ್ಷ ಕೆ. ಸೀತಾರಾಮ ಗೌಡ, ಸ್ನೇಹಿತರೊಂದಿಗೆ ಸ್ಥಳಕ್ಕೆ ತೆರಳಿ, 108 ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿ, ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದರು. ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಪಿಡಿಒ ಚೆನ್ನಪ್ಪ ಗೌಡ ಕಜೆಮೂಲೆ ಸ್ಥಳದಲ್ಲಿದ್ದು, ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next