Advertisement

Kadaba: ಮನೆಗಳಲ್ಲಿ ಮಕ್ಕಳಿಂದಲೇ ಶಾರದಾ ಪೂಜೆ

04:20 PM Oct 11, 2024 | Team Udayavani |

ಕಡಬ: ವಿಜಯದಶಮಿ ದಿನದಂದು ಕಡಬ ತಾಲೂಕಿನ ಕೊçಲ ಗ್ರಾಮದ ಮನೆಗಳಲ್ಲಿ ತಮ್ಮ ಪಠ್ಯ ಪುಸ್ತಕಗಳಿಗೆ ತಾವೇ ಹೂವು ಇಟ್ಟು, ಆರತಿ ಎತ್ತಿ ಶಾರದಾ ಪೂಜೆ ನಡೆಸುವ ವಿನೂತನ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಬಾರಿ ಆರಂಭವಾದ ಈ ಹೊಸ ಸಂಪ್ರದಾಯವನ್ನು ದ.ಕನ್ನಡ ಮತ್ತು ಕೊಡಗು ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ.

Advertisement

ಕಳೆದ ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಿಂದ ಗ್ರಾಮದ ಪ್ರತಿ ಮನೆಗಳಿಗೂ ಏಕಾರತಿ, ಘಂಟಾ ಮಣಿ ಹಾಗೂ ತಟ್ಟೆಯನ್ನು ಪ್ರಸಾದ ರೂಪವಾಗಿ ನೀಡಲಾಗಿತ್ತು. ಅವುಗಳನ್ನು ಬಳಸಿ ವಿಜಯದಶಮಿಯದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಚಿಭೂತರಾಗಿ, ಶುಭ್ರ ವಸ್ತ್ರ ಉಟ್ಟು ಮನೆಯ ದೇವರ ಕೋಣೆಯಲ್ಲಿ ತಮ್ಮ ಪುಸ್ತಕಗಳನ್ನಿಟ್ಟು ಅದಕ್ಕೆ ಹೂವು, ತುಳಸಿ, ಕುಂಕುಮ, ಅಕ್ಷತೆ ಇಟ್ಟು, ಆರತಿ ಎತ್ತಿ ಪೂಜೆ ಮಾಡಿ ಅದರ ಫೂಟೋಗಳನ್ನು ದೇವಸ್ಥಾನದ ಪ್ರಮುಖರೊಂದಿಗೆ ಹಂಚಿಕೊಳ್ಳುವ ಮೂಲಕ ಹೊಸದೊಂದು ಚಿಂತನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.

ʼನಮ್ಮ ದೇವಸ್ಥಾನ-ನಮ್ಮ ವಿದ್ಯಾರ್ಥಿಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಧರ್ಮ ಜಾಗƒತಿಯ ನೆಲೆಯಲ್ಲಿ ಕಳೆದ ವರ್ಷ ಗ್ರಾಮದ ಸುಮಾರು 600 ಮನೆಗಳಲ್ಲಿ ಮಕ್ಕಳು ಶಾರದಾಪೂಜೆ ನಡೆಸಿದ್ದರು ಎಂದು ಹೇಳುತ್ತಾರೆ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ.

ಈ ಬಾರಿ ಜಿಲ್ಲೆಗೆ ವಿಸ್ತರಣೆ
ಕೊಯಿಲ ಗ್ರಾಮದಲ್ಲಿ ಆರಂಭಗೊಂಡ ಚಿಂತನೆಯನ್ನು ಈ ಬಾರಿ ದೇವಾಲಯಗಳ ಸಂವರ್ಧನ ಸಮಿತಿಯ ಮೂಲಕ ದ.ಕ. ಹಾಗೂ ಕೊಡಗು ಜಿಲ್ಲೆಗಳಿಗೆ ವಿಸ್ತರಣೆ ಮಾಡಿದ್ದೇವೆ. ಎಲ್ಲೆಡೆ ಏಕಕಾಲದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ 5 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ದೇವಾಲಯಗಳ ಸಂವರ್ಧನ ಸಮಿತಿಯ ಮಂಗಳೂರು ವಿಭಾಗ ಪ್ರಮುಖ್‌ ಕೇಶವ ಪ್ರಸಾದ್‌ ಮುಳಿಯ ಹೇಳಿದ್ದಾರೆ.

-ನಾಗರಾಜ್‌ ಎನ್‌. ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next