Advertisement

Kadaba; ಸ್ಕೂಟರ್‌-ಟಿಪ್ಪರ್‌ ಢಿಕ್ಕಿ: ಸವಾರ ಗಂಭೀರ

12:08 AM Feb 09, 2024 | Team Udayavani |

ಕಡಬ: ಸ್ಕೂಟರ್‌ ಹಾಗೂ ಟಿಪ್ಪರ್‌ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟರ್‌ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಕೆ.ಸಿ. ಫಾರ್ಮ್ ಗೇಟ್‌ ಬಳಿ ಬುಧವಾರ ಸಂಭವಿಸಿದೆ.

Advertisement

ಸ್ಕೂಟರ್‌ ಸವಾರ, ರಾಮಕುಂಜ ಗ್ರಾಮದ ನೀರಾಜೆ ನಿವಾಸಿ ಆದಂ ಎನ್‌. (52) ಅವರು ಗಂಭೀರ ಗಾಯಗೊಂಡವರು.ಅವರು ಸ್ಕೂಟರ್‌ನಲ್ಲಿ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಗೆ ಹೋಗುತ್ತಿರುವಾಗ ಕೊಯಿಲ ಕೆ.ಸಿ. ಫಾರ್ಮ್ ಗೇಟ್‌ ಬಳಿ ಕಡಬ ಕಡೆಗೆ ಬರುತ್ತಿದ್ದ ಟಿಪ್ಪರ್‌ ಚಾಲಕ ರಸ್ತೆಯ ತೀರಾ ಬಲಬದಿಗೆ ಟಿಪ್ಪರ್‌ ಅನ್ನು ಚಲಾಯಿಸಿಕೊಂಡು ಸ್ಕೂಟರ್‌ಗೆ ಢಿಕ್ಕಿ ಹೊಡೆಸಿದ್ದ. ಘಟನೆಯಲ್ಲಿ ಸ್ಕೂಟರ್‌ ಸವಾರ ಆದಂ ಅವರು ಸ್ಕೂಟರ್‌ ಸಮೇತ ಟಿಪ್ಪರ್‌ನಡಿಗೆ ಬಿದ್ದು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ಆದಂ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next