Advertisement

ಕಬಡ್ಡಿ ಪಂದ್ಯಾಟ: ಉಳ್ಳಾಲಬೈಲು ತಂಡಕ್ಕೆ ಪ್ರಶಸ್ತಿ 

11:29 AM Jan 04, 2018 | Team Udayavani |

ಉಳ್ಳಾಲ: ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಇದರ ಆಶ್ರಯದಲ್ಲಿ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಸಹಯೋಗದಲ್ಲಿ ದ. ಕ., ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ 70 ಕೆ.ಜಿ. ವಿಭಾಗದ ಕಬಡ್ಡಿ
ಪಂದ್ಯಾಟ ಎಸ್‌ವಿವಿಎಸ್‌ ಟ್ರೋಫಿ -2017ನ್ನು ವೈದ್ಯನಾಥ ಉಳ್ಳಾಲಬೈಲು ತಂಡ ಪಡೆದುಕೊಂಡಿತು.

Advertisement

ದ್ವಿತೀಯ ಶ್ರೀ ದುರ್ಗಾ ಉಳ್ಳಾಲ, ತೃತೀಯ ವಿಕಾಸ್‌ ಕಾಲೇಜು ಮಂಗಳೂರು, ಚತುರ್ಥ ಸೆವೆನ್‌ ಸ್ಟಾರ್‌ ಕಲ್ಪನೆ ಪ್ರಶಸ್ತಿ ಗಳಿಸಿತು. ಉದ್ಯಮಿ ಜಾನ್‌ ಸುರೇಶ್‌ ಬಹುಮಾನ ವಿತರಿಸಿದರು. ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲದ ಅಧ್ಯಕ್ಷ ಚಂದ್ರಹಾಸ್‌ ಮತ್ತು ಪದಾಧಿಕಾರಿಗಳು, ಹಾಗೂ ಹಲವಾರು ಮಂದಿ ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು. ಸುಮಾರು 20 ತಂಡಗಳು ಭಾಗವಹಿಸಿದ್ದವು. ಪ್ರವೀಣ್‌ ಎಸ್‌. ಕುಂಪಲ ಮತ್ತು ಭಗವಾನ್‌ ದಾಸ್‌ ತೊಕ್ಕೊಟ್ಟು ವೀಕ್ಷಕ ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next