Advertisement

ಕಬಡ್ಡಿ ಆಟಗಾರರ ಆಯ್ಕೆಗೆ ಭಾರೀ ಸ್ಪಂದನೆ

06:10 AM Mar 12, 2018 | Team Udayavani |

ಬೆಂಗಳೂರು: ಭಾನುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಅಖೀಲ ಭಾರತ ಕಬಡ್ಡಿ ಆಟಗಾರರ ಮತ್ತು ತೀರ್ಪುಗಾರರ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು ಮೊದಲ ದಿನ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.

Advertisement

ಭಾನುವಾರ ಸುಮಾರು 100 ಕ್ಕೂ ಹೆಚ್ಚು ಕಬಡ್ಡಿ ಪ್ರತಿಭೆಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ತೀರ್ಪುಗಾರರ ವಿಭಾಗದ ಆಯ್ಕೆಯಲ್ಲಿ 15 ಜನ ಪಾಲ್ಗೊಂಡಿದ್ದರು. ಸೋಮವಾರ ಕೂಡ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಇನ್ನು ಹೆಚ್ಚಿನ ಕಬಡ್ಡಿ ಪ್ರತಿಭೆಗಳು ಹೆಸರನ್ನು ನೋಂದಾಯಿಸಿಕೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ 20 ಯುವ ಪ್ರತಿಭೆಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಅದೇ ರೀತಿ ತೀರ್ಪುಗಾರರಾಗಿ ಐವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಆಟ ಇಂದು ಪ್ರೊ ಕಬಡ್ಡಿಯಿಂದಾಗಿ ಭಾರೀ ಜನಪ್ರಿಯತೆ ಪಡೆಯುತ್ತಿದೆ. ದೇಶಾದ್ಯಂತ ಕಬಡ್ಡಿ ಜ್ವರ ಆರಂಭವಾಗಿದೆ. ಕಬಡ್ಡಿ ಆಡುವ ಆಟಗಾರರು ತಾರಾ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next