Advertisement

BCCI;ಹಲವು ಸಂಗತಿಗಳು ಆಟಗಾರರ ಕೈಯಲ್ಲಿ ಇರಲ್ಲ: ಇಶಾನ್‌ ಕಿಶನ್‌

12:38 AM Apr 13, 2024 | Team Udayavani |

ಮುಂಬಯಿ: ಭಾರತೀಯ ಕ್ರಿಕೆಟ್‌ ಮಂಡಳಿಯ ಕೇಂದ್ರೀಯ ಗುತ್ತಿಗೆ ಕಳೆದುಕೊಂಡದ್ದರ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಇಶಾನ್‌ ಕಿಶನ್‌; ಹಲವು ಸಂಗತಿಗಳು ಆಟಗಾರರ ನಿಯಂತ್ರಣದಲ್ಲಿರಲ್ಲ ಎಂದು ಹೇಳಿದ್ದಾರೆ. ಗುರುವಾರ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಪಂದ್ಯಗಳಿಂದ ಹಿಂದೆ ಸರಿದಾಗ ಜನ ಸಾಕಷ್ಟು ಮಾತನಾಡಿದರು.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಯಾಯಿತು. ಆದರೆ ಸಾಕಷ್ಟು ವಿಷಯಗಳು ಆಟಗಾರರ ನಿಯಂತ್ರಣದಲ್ಲಿ ಇರುವುದಿಲ್ಲ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದನ್ನಷ್ಟೇ ನಾವು ಮಾಡಬಹುದು’ ಎಂದು ಅವರು ಹೇಳಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹಿಂದೆ ಸರಿದ ಬಳಿಕ ರಣಜಿ ಆಡುವಂತೆ ಬಿಸಿಸಿಐ ಇಶಾನ್‌ ಕಿಶನ್‌ಗೆ ಸೂಚಿಸಿತ್ತು. ಆದರೆ ಇದನ್ನು ಕಿಶನ್‌ ಪಾಲಿಸಿರಲಿಲ್ಲ. ಬಳಿಕ ಕಿಶನ್‌ರನ್ನು ಬಿಸಿಸಿಐ ಗುತ್ತಿಗೆಯಿಂದ ಕೈಬಿಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next