Advertisement

ಪೌರ ಸೇವಕರಿಗೆ “ಕಾಣದಂತೆ ಮಾಯವಾದನು’ವಿಶೇಷ ಪ್ರದರ್ಶನ

11:18 AM Feb 27, 2020 | Lakshmi GovindaRaj |

ಇತ್ತೀಚೆಗಷ್ಟೆ ಬಿಡುಗಡೆಯಾದ “ಕಾಣದಂತೆ ಮಾಯವಾದನು’ ಚಿತ್ರ ಬಿಡುಗಡೆ ಯಾದ ಎಲ್ಲ ಕೇಂದ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನಡೆಯುತ್ತಿದೆ. ಇದೇ ವೇಳೆ ಚಿತ್ರತಂಡ, ಮೈಸೂರು ನಗರದ ಸುಮಾರು 3 ಸಾವಿರ ಪೌರಕಾರ್ಮಿಕರು ಮತ್ತವರ ಕುಟುಂಬದವರಿಗೆ ಉಚಿತವಾಗಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ.

Advertisement

ಮೈಸೂರು ನಗರಕ್ಕೆ ಸ್ವಚ್ಛ ಭಾರತ ಅಭಿಯಾನದಲ್ಲಿ ಸ್ವಚ್ಛ ನಗರಿ ಎಂಬ ಹಿರಿಮೆ ಮುಡಿಗೇರಿರುವುದರಿಂದ, ಇದಕ್ಕೆ ಕಾರಣರಾದ ಮಹಾನಗರದ ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಚಿತ್ರತಂಡ ಇಂಥದ್ದೊಂದು ವಿಭಿನ್ನ ಕಾರ್ಯಕ್ಕೆ ಮುಂದಾಗಿದೆ. ಇದೇ ಫೆ. 24 ರಿಂದ ಫೆ. 26 ವರೆಗೆ ಮೈಸೂರಿನ ವುಡ್‌ಲ್ಯಾಂಡ್ಸ್‌ ಚಿತ್ರಮಂದಿರದಲ್ಲಿ ಪ್ರತಿದಿನ ಸಂಜೆ 4.30 ಮತ್ತು 7.30ರ ಪ್ರದರ್ಶನ ವನ್ನು ಪೌರ ಕಾರ್ಮಿಕರಿಗೆ ಚಿತ್ರತಂಡ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ವಿಕಾಸ್‌, ಸಿಂಧು ಲೋಕನಾಥ್‌, ಧರ್ಮಣ್ಣ ಕಡೂರ್‌, ಅಚ್ಯುತ ಕುಮಾರ್‌, ಸುಚೇಂದ್ರ ಪ್ರಸಾದ್‌, ವಿನಯಾ ಪ್ರಕಾಶ್‌, ಉದಯ್‌, ಭಜರಂಗಿ ಲೋಕಿ, ಸೀತಾ ಕೋಟೆ, ಬಾಬು ಹಿರಣ್ಣಯ್ಯ ಮೊದಲಾದವರು “ಕಾಣದಂತೆ ಮಾಯವಾದನು’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ದ್ದಾರೆ. ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಕಾಣದಂತೆ ಮಾಯ ವಾದನು’ ಚಿತ್ರಕ್ಕೆ ರಾಜ್‌ ಪತ್ತಿಪಾಟಿ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next