Advertisement

ಈಶ್ವರಪ್ಪ ಮನುಷ್ಯನೇ ಅಲ್ಲಾ..: ಸಿದ್ದರಾಮಯ್ಯ ಕಿಡಿ

09:37 AM Jul 01, 2019 | Vishnu Das |

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರೂ ಜನರ ತೆರಿಗೆ ಹಣದಲ್ಲೇ ಯೋಜನೆಗಳನ್ನು ನೀಡುತ್ತಿದ್ದಾರೆ,ಅವರ ಸ್ವಂತ ಹಣದಲ್ಲಿ ನೀಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಈಶ್ವರಪ್ಪ ಮನುಷ್ಯನೇ ಅಲ್ಲ. ನಾಗರಿಕತೆ, ಸಂಸ್ಕೃತಿಯೇ ಇಲ್ಲ. ಈಶ್ವರಪ್ಪ ನಾಟ್‌ ಎಟ್‌ ಆಲ್‌ ಹ್ಯೂಮನ್‌ ಬಿಯಿಂಗ್‌ ಎಂದು ಕಿಡಿ ಕಾರಿದರು.

ಕನಸು ಕಾಣುತ್ತಾ ಕೂತಿರಬೇಕು
ನಾನಂತು ಮುಖ್ಯಮಂತ್ರಿ ಆದೆ. ಈಶ್ವರಪ್ಪನಿಗಂತೂ ಸಿಗುವುದಿಲ್ಲ, ಯಡಿಯೂರಪ್ಪನವರೂ ಮುಖ್ಯಮಂತ್ರಿ ಆಗಲ್ಲ.ಕನಸು ಕಾಣುತ್ತಾ ಕುಳಿತಿರಬೇಕು ಎಂದರು.

ಈಸ್ಟ್‌ ಇಂಡಿಯಾ ಕಂಪೆನಿ ಸೆರಗು!
ಶುಕ್ರವಾರ ಕಿಡಿ ಕಾರಿದ್ದ ಈಶ್ವರಪ್ಪ ಸಿದ್ದರಾಮಯ್ಯ ಅಲ್ಲೊಂದು, ಇಲ್ಲೊಂದು ಇರುವ ಈಗಿನ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪೆನಿಯವರ ಸೆರಗು ಹಿಡಿದುಕೊಂಡು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು.

ಸಿದ್ದರಾಮಯ್ಯನವರು ಯೋಜನೆಗಳನ್ನು ತೆರಿಗೆ ಹಣದಲ್ಲಿ ನೀಡಿದ್ದರು, ಅವರ ಸ್ವಂತ ಹಣದಿಂದ ನೀಡಿಲ್ಲ ಎಂದು ಈಶ್ವರಪ್ಪ ಕಿಡಿ ಕಾರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next