Advertisement

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

07:38 PM Apr 23, 2024 | Shreeram Nayak |

ಶಿವಮೊಗ್ಗ:ಈಶ್ವರಪ್ಪ ಹಿರಿಯರು. ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ. ಅವರ ಉಚ್ಛಾಟನೆ “ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಹೇಳಿದ್ದು ಹಾಲು-ಅನ್ನ’ ಎನ್ನುವಂತಾಗಿದೆ. ಅವರು ಸಹ ಉಚ್ಛಾಟನೆ ಬಯಸಿದ್ದೇನೆ ಎಂದಿದ್ದರು. ಶಿವಮೊಗ್ಗ ಜಿಲ್ಲೆಯ ನಮ್ಮ ಕಾರ್ಯಕರ್ತರು ಯಾರೂ ಅವರ ಜತೆ ಕೈ ಜೋಡಿಸಲ್ಲ. ರಾಘವೇಂದ್ರ ಅತಿ ಹೆಚ್ಚು ಅಂತರದಲ್ಲಿ ಗೆಲ್ಲುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Advertisement

ಶಿಕಾರಿಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರದ ಪೊಳ್ಳು ಗ್ಯಾರಂಟಿ ಕೈಕೊಡುತ್ತಿದೆ. ಮೋದಿ ಗ್ಯಾರಂಟಿ ಬಗ್ಗೆ ಜನ ವಾಲುತ್ತಿದ್ದಾರೆ. ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿದೆ. ಕಾಂಗ್ರೆಸ್‌ಗೆ ಗಾಬರಿ, ಆತಂಕ ಸೃಷ್ಟಿ ಆಗಿದೆ.ಚಾಮರಾಜನಗರದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಪ್ರಚಾರ ಮಾಡಿದ್ದೇನೆ. ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಹಿನ್ನಡೆ ಆಗಿತ್ತು. ಈಗ ರಾಜ್ಯ ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಸಂತೋಷ್‌ ಲಾಡ್‌ ಬಹಳ ಅನುಭವಿ ರಾಜಕಾರಣಿ. ಅವರು ಪ್ರಧಾನಮಂತ್ರಿ ಬಗ್ಗೆ ಹೇಳಿಕೆ ನೀಡದ್ದಕ್ಕೆ ನಾನು ಅವರ ಬಗ್ಗೆ ಟೀಕಿಸಿದ್ದೇನೆ. ಜನ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಬಯಸಿದ್ದಾರೆ. ಇವರು ಏನೇ ಆಶ್ವಾಸನೆ ಕೊಟ್ಟರೂ ಜನ ನಂಬಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next