Advertisement

ಸ್ಕೂಟರ್ ನಲ್ಲಿ ನಂಬರ್ ಪ್ಲೇಟ್ ಇಲ್ಲವೆಂದು ಥಳಿಸಿದ ಪೊಲೀಸರು: ಅವಮಾನದಿಂದ ಯುವಕ ಆತ್ಮಹತ್ಯೆ

05:47 PM Jun 30, 2020 | keerthan |

ಮೈಸೂರು: ಪೊಲೀಸರ ಕಿರುಕುಳದಿಂದ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ ಆರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಸುಣ್ಣದ ಕೇರಿ ನಿವಾಸಿ ಕುಮಾರ್ ಎಂಬುವವರ ಪುತ್ರ ದರ್ಶನ್ (17) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವಾತ.

ಈತ ಸ್ಕೂಟರ್ ಹೊಂದಿದ್ದು, ಪೊಲೀಸ್ ತಪಾಸಣೆ ವೇಳೆ ಸ್ಕೂಟರ್ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಇದನ್ನು ಪ್ರಶ್ನಿಸಿದ ಕೆ ಆರ್ ಠಾಣೆ ಪೊಲೀಸರು, ಸ್ಕೂಟರ್ ವಶ ಪಡೆದಿದ್ದರು.

ನಂತರ ಈತನ ಜೊತೆಗಿದ್ದ ಸ್ನೇಹಿತ ರವಿ ಎಂಬಾತನನ್ನ ಮನೆಗೆ ಕಳುಹಿಸಿದ ಪೊಲೀಸರು ದರ್ಶನ್ ಗೆ ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅವಮಾನ ಸಹಿಸಲಾಗದೆ ಮನೆಗೆ ಬಂದ ದರ್ಶನ್, ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆ ಆರ್ ಠಾಣೆಯ ಮುಂದೆ ಮೃತ ದರ್ಶನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗನ ಸಾವಿಗೆ ಪೊಲೀಸರು ಕಾರಣರಾದರು ಎಂದು ಆರೋಪಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next