Advertisement

ಸಿಎಂ ಎಚ್ಚರಿಕೆಗೆ ಜೂನಿಯರ್‌ ವೈದ್ಯರು ಡೋಂಟ್‌ ಕೇರ್‌: ಮುಷ್ಕರ 4ನೇ ದಿನಕ್ಕೆ

09:46 AM Jun 18, 2019 | Team Udayavani |

ಕೋಲ್ಕತ : ಪಶ್ಚಿಮ ಬಂಗಾಲದಲ್ಲಿ ಕಿರಿಯ ವೈದ್ಯರ ಮುಷ್ಕರ ಇಂದು ಶುಕ್ರವಾರ ನಾಲ್ಕನೇ ದಿನ ತಲುಪಿದೆ.

Advertisement

ಮುಷ್ಕರದಿಂದಾಗಿ ರಾಜ್ಯದಲ್ಲಿನ ಸರಕಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆ ಮತ್ತು ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ದಿನ ನಿತ್ಯದ ವೈದ್ಯಕೀಯ ಸೇವೆಗಳು ತೀವ್ರವಾಗಿ ಬಾಧಿತವಾಗಿವೆ.

ಹಾಗಿದ್ದರೂ ನೀಲ್‌ ರತನ್‌ ಸರ್ಕಾರ್‌ (ಎನ್‌ಆರ್‌ಎಸ್‌) ಮೆಡಿಕಲ್‌ ಕಾಲೇಜ್‌ ಆಸ್ಪತ್ರೆ ಸೇರಿದಂತೆ ಒಂದೆರಡು ಆಸ್ಪತ್ರೆಗಳಲ್ಲಿ ಇಂದು ಶುಕ್ರವಾರ ಬೆಳಗ್ಗೆ ತುರ್ತು ವೈದ್ಯಕೀಯ ಸೇವೆಗಳು ಸಿಗುತ್ತಿವೆ ಎಂದು ವರದಿಗಳು ತಿಳಿಸಿವೆ.

ಕರ್ತವ್ಯಕ್ಕೆ ಹಾಜರಾಗದಿದ್ದರೆ ಅತ್ಯಂತ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಡುವಿನೊಂದಿಗೆ ನೀಡಿದ್ದ ಎಚ್ಚರಿಕೆಗೆ ಜೂನಿಯರ್‌ ವೈದ್ಯರು ಡೋಂಟ್‌ ಕೇರ್‌ ನಿಲುವನ್ನು ತೋರಿಸಿದ್ದಾರೆ. ಪರಿಣಾಮವಾಗಿ ಮುಷ್ಕರ ಇಂದು ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next