Advertisement

Congress ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಜಂಗಲ್ ರಾಜ್ಯ ಸೃಷ್ಟಿ: ಬೊಮ್ಮಾಯಿ

03:10 PM Jul 12, 2023 | Team Udayavani |

ಬೆಂಗಳೂರು: ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಜಂಗಲ್ ರಾಜ್ಯ ಸೃಷ್ಟಿಯಾಗಿದೆ. ಜನ ನಿರ್ಭೀತಿಯಿಂದ ಓಡಾಡಲಾಗುತ್ತಿಲ್ಲ. ಸಾಧು ಸಂತರನ್ನು ಕೊಲ್ಲಲಾಗುತ್ತಿದೆ, ನಮ್ಮ ಕಾರ್ಯಕರ್ತರು, ಟೆಕ್ಕಿಗಳು, ಜನ ಸಾಮಾನ್ಯರನ್ನು ಬಿಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಕೊಂದವರು ಇನ್ಸ್ಟಾಗ್ರಾಮ್ ಸ್ಟೇಟಸ್ ಹಾಕ್ಕೊಂಡು ಇರುತ್ತಾರೆ. ಭಯ ಇಲ್ಲ. ಮರಳು ಮಾಫಿಯಾ ತಡೆಯಲು ಹೋದ ಪೊಲೀಸರ ಹತ್ಯೆ ನಡೆಯುತ್ತದೆ. ಪೊಲೀಸರ ನೈತಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತಬಿಖೆಗೆ ವಹಿಸಿ ಎಂದರೆ ದಪ್ಪಚರ್ಮದ ಸರ್ಕಾರ ಹಠಮಾರಿತನ ಮಾಡುತ್ತಿದೆ. ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಕಾನೂನು ಸುವ್ಯವಸ್ಥೆ ಹದ್ದುಬಸ್ತಿನಲ್ಲಿಟ್ಟು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದೇವೆ. ಕೇಂದ್ರ ಸರ್ಕಾರಕ್ಕೂ ವರದಿ ನೀಡುವಂತೆ ಮನವಿ ಮಾಡಿದ್ದೇವೆ. ಸರ್ಕಾರ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆ, ತಾಲೂಕಿನಾದ್ಯಂತ ಹೋರಾಟ ಒಯ್ಯುತ್ತೇವೆ ಎಂದು ಹೇಳಿದರು.

ದೇಶದ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನೆಹರು ಗಾಂಧಿ ಕುಟುಂಬ ಕಾನೂನು ಮೀರಿದ ಕುಟುಂಬ ಎಂದುಕೊಂಡಿದ್ದಾರೆ. ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ಹೋರಾಡುವ ಇವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಕೇವಲ ಒಂದು ಕುಟುಂಬದ ಪರವಾದ ಹೋರಾಟ ಇವರದ್ದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next