Advertisement

ನ್ಯಾಯಾಂಗದಲ್ಲಿ ಮೀಸಲಾತಿಗೆ ಚಿಂತನೆ

01:20 PM Dec 28, 2018 | |

ಲಕ್ನೋ/ಹೊಸದಿಲ್ಲಿ: ನ್ಯಾಯಾಂಗ ಇಲಾಖೆಗಳಲ್ಲಿನ ನೇಮಕಾತಿಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸಲು ಉದ್ದೇಶಿರುವುದರ ಜತೆಗೆ, ಆ ಪರೀಕ್ಷೆಗಳಲ್ಲಿ ಪರಿಶಿಷ್ಟ  ಜಾತಿ, ಪರಿಶಿಷ್ಟ  ಪಂಗಡಗಳಿಗೆ ಮೀಸಲಾತಿ ನೀಡುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

Advertisement

ಈ ಮೀಸಲಾತಿಗಳ ಮೂಲಕ ಶೋಷಿತ ವರ್ಗಗಳಿಗೆ ನ್ಯಾಯಾಂಗದಲ್ಲಿ ಉತ್ತಮ ಸ್ಥಾನಗಳಿಗೆ ಏರುವ ಅವಕಾಶ ಕಲ್ಪಿಸುವುದರ ಜತೆಗೆ, ಅವರ ಪ್ರತಿಭೆಯನ್ನು ನ್ಯಾಯಾಂಗ ಕ್ಷೇತ್ರದಲ್ಲಿ ಅಧಿಕಾರಿಗಳಾಗುವ ಮಟ್ಟಕ್ಕೆ ಏರಿಸುವ ಹೊಸ ಆಶಯವೂ ಇದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next