Advertisement

ಜಡ್ಕಲ್‌: ಗಾಳಿ-ಮಳೆ; ವ್ಯಾಪಕ ಹಾನಿ

08:00 AM Jul 21, 2017 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾಮದಲ್ಲಿ ಗುರುವಾರ ಮುಂಜಾವ ಬೀಸಿದ ಭಾರೀ ಗಾಳಿ-ಮಳೆಗೆ ಅಲ್ಲಿನ ಶಾಲೆ ಸಹಿತ ವಿವಿಧ ಮನೆಗಳ ಹೆಂಚು, ಆರ್‌ಸಿಸಿ ಶೀಟ್‌ಗಳು ಹಾರಿಹೋಗಿ ಅಪಾರ ನಷ್ಟ ಉಂಟಾಗಿದೆ. ವಿವಿಧೆಡೆ ಅಡಿಕೆ ಹಾಗೂ ಬಾಳೆ ತೋಟ ನಾಶವಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ.

Advertisement

ಜಡ್ಕಲ್‌ ಗ್ರಾಮದ ಗಂಗಾಧರನ್‌ ಅವರ ಮನೆ ಭಾಗಶಃ ಹಾನಿಯಾಗಿದ್ದು, ಜಾಯ್‌ ಜೋಸೆಫ್‌ ಅವರ ಮನೆಯ ಮಾಡು ಸಂಪೂರ್ಣವಾಗಿ ಹಾರಿಹೋಗಿದೆ. ವನಜಾ ವಿಜಯಾ ಅರಳೇಕಟ್ಟೆ ಅವರ ಮನೆ ಹಾನಿಗೊಂಡಿದೆ. ಕೆ.ಸಿ.ಮ್ಯಾಥ್ಯೂ ಅವರ ಅಡಿಕೆ ತೋಟದ 200ಕ್ಕೂ ಹೆಚ್ಚು ಬೆಳೆದ ಅಡಿಕೆ ಮರಗಳು ಮುರಿದು ಬಿದ್ದಿದೆ. ತಂಗಚ್ಚನ್‌ ಅವರ ತೋಟದ ಅಡಿಕೆ ಮರಗಳು ನೆಲಕಚ್ಚಿವೆ. ರಮಣನ್‌ ಅವರ ಬಾಳೆ ತೋಟವು ಧ್ವಂಸಗೊಂಡಿದೆ.  ಜಾನ್‌ ಪಿ.ಎಲ್‌. ಅವರ ರಬ್ಬರ್‌ ಹಾಗೂ ಅಡಿಕೆ ತೋಟವು ನಾಶವಾಗಿದೆ. ಹೊಸೂರು ಗ್ರಾಮದ ಜೋಸೆಫ್‌ ಅವರ ತೋಟದ 200 ಅಡಿಕೆ ಮರಗಳು ಮುರಿದು ಬಿದ್ದಿದೆ. ಕಾನಿR ನಿವಾಸಿ ಮ್ಯಾಥ್ಯೂ ಅವರ ಅಡಿಕೆ ತೋಟ ನಾಶವಾಗಿದೆ.

ಮೆಸ್ಕಾಂ ಇಲಾಖೆಯ ಅನೇಕ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದು ಜಡ್ಕಲ್‌ನ ಸರಕಾರಿ ಹಿ.ಪ್ರಾ. ಶಾಲೆಯ ಮಾಡಿನ ಹೆಂಚು ಹಾರಿಹೋಗಿದ್ದು ನಷ್ಟ ಸಂಭವಿ ಸಿದೆ. ಶಾಸಕ ಗೋಪಾಲ ಪೂಜಾರಿ ಸ್ಥಳಕ್ಕೆ ಭೇಟಿ ಇತ್ತು ಪರಿಶೀಲನೆ ನಡೆಸಿ ದರು. ಜಡ್ಕಲ್‌ ಗ್ರಾ.ಪಂ. ಗ್ರಾಮ ಲೆಕ್ಕಿಗ ಹರೀಶ್‌, ಗ್ರಾ.ಪಂ. ಸದಸ್ಯ ದೇವದಾಸ್‌ ಸ್ಥಳಕ್ಕೆ ಭೇಟಿ ಇತ್ತು ಉಂಟಾದ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next