Advertisement

ಅಂತರ ಸಾಧಿಸಿ ಜಯ ಗಳಿಸೋಣ

03:40 PM Apr 12, 2020 | Naveen |

ಜೋಯಿಡಾ: ಎಲ್ಲರೂ ಮನೆಯಲ್ಲೇ ಇದ್ದು ಸಾಮಾಜಕ ಅಂತರ ಕಾಯ್ದುಕೊಂಡು ಕೊರೊನಾ ವಿರುದ್ಧ ಜಯ ಸಾ ಧಿಸೋಣ ಎಂದು ಆರ್‌.ವಿ. ದೇಶಪಾಂಡೆ ಕರೆ ನೀಡಿದರು.  ಪಂ ಸಭಾಭವನದಲ್ಲಿ ಅಧಿಕಾರಿಗಳ ಸಭೆ ಬಳಿಕ ತಾಲೂಕಾಸ್ಪತ್ರೆ, ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

Advertisement

ಸ್ಥಳೀಯ ಜನಪ್ರತಿನಿಧಿಗಳೂ ಜನರ ಸಮಸ್ಯೆಗೆ ಸ್ಪಂದಿಸಬೇಕು. ಏ. 14ರೊಳಗೆ ಎಲ್ಲರಿಗೂ ಪಡಿತರ ವಿತರಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಬೆಳೆ ಹಾನಿಯಾದರೆ ಪರಿಹಾರ ನೀಡಲು, ಅಗತ್ಯ ಬೀಜ-ಗೊಬ್ಬರ ದಾಸ್ತಾನಿಡಲು, ಹಣ್ಣುಗಳಿಗೆ ಮಾರುಕಟ್ಟೆ ಕಲ್ಪಿಸಲು, ರೈತರಿಗೆ ಕೃಷಿ ಉಪಕರಣ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಶಾ ಕಾರ್ಯಕರ್ತರು ಹಳ್ಳಿಗೆ ಹೋದಾಗ ಸ್ಪಂದಿಸಿ ಸಹಕರಿಸಬೇಕು. ಯಾರೂ ಅನಗತ್ಯ ಮನೆಯಿಂದ ಹೊರಬರಬಾರದು. ಅಗತ್ಯವಿದ್ದರೆ ಮಾತ್ರ ತಹಶೀಲ್ದಾರ್‌ ಇಲ್ಲವೇ ತಾಪಂ ಇಒ ಪರವಾನಗಿ ಪಡೆದುಕೊಳ್ಳಬೇಕೆಂದರು.

ತಾಲೂಕಾ ಕೇಂದ್ರದಲ್ಲಿ ಕೊರೊನಾ ಹಿನ್ನೆಲೆಯಲ್ಲಿ 55 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ತಾಲೂಕಾಸ್ಪತ್ರೆಯಲ್ಲಿ 20 ಬೆಡ್‌, ಬಾಲಕರ ಹಾಸ್ಟೆಲ್‌ನಲ್ಲಿ 15 ಹಾಗೂ ಮೊರಾರ್ಜಿ ಹಾಸ್ಟೆಲ್‌ನಲ್ಲಿ 20 ಬೆಡ್‌ ವ್ಯವಸ್ಥೆ ಮಾಡಲಾಗಿದೆ ಎಂದರು. ಎಂಎಲ್‌ಸಿ ಘೋಕ್ಲೃಕರ್‌, ಪ್ರಿಯಾಂಕಾ ಎಂ., ತಾಪಂ ಅಧ್ಯಕ್ಷೆ ನರ್ಮದಾ ಪಾಕ್ಲೃಕರ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next