Advertisement

ಒಡಿಶಾದಲ್ಲಿ ಪತ್ರಕರ್ತರು “ಮುಂಚೂಣಿ ಸೇನಾನಿಗಳು’

01:24 AM May 03, 2021 | Team Udayavani |

ಭುವನೇಶ್ವರ: ಕೋವಿಡ್ ಕಾಲದಲ್ಲಿ ಪತ್ರಕರ್ತರ ಸೇವೆ ಅಮೂಲ್ಯ ಎಂದು ಪರಿಗಣಿಸಿರುವ ಒಡಿಶಾ ರಾಜ್ಯ ಸರಕಾರವು ಕಾರ್ಯ ನಿರತ ಪತ್ರಕರ್ತರನ್ನೂ “ಮುಂಚೂಣಿಯ ಕೊರೊನಾ ಸೇನಾನಿಗಳು’ ಎಂದು ಘೋಷಿಸಿದೆ.

Advertisement

ಸರಕಾರದ ಈ ನಿರ್ಧಾರದಿಂದ ರಾಜ್ಯದ 6,944 ಪತ್ರಕರ್ತರಿಗೆ ಸಹಾಯವಾಗಲಿದೆ. ಅವರು ಗೋಪಬಂಧು ಸಂಬಂಧಿಕ ಸ್ವಾಸ್ಥ್ಯ ವಿಮಾ ಯೋಜನೆಯಡಿ ತಲಾ 2 ಲಕ್ಷ ರೂ.ಗಳ ವಿಮಾ ಸುರಕ್ಷೆ ಪಡೆಯಲಿದ್ದಾರೆ. ಕರ್ತವ್ಯ ದಲ್ಲಿದ್ದಾಗ ಕೊರೊನಾದಿಂದ ಮರಣ ಹೊಂದುವ ಪತ್ರಕರ್ತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಧನ ನೀಡುವುದಾಗಿಯೂ ಒಡಿಶಾ ಸರಕಾರ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next