Advertisement

ಮೃತ ಕುಸ್ತಿಪಟು ಸಂತೋಷ ಕುಟುಂಬಕ್ಕೆ ಜೋಶಿ ಸಾಂತ್ವನ

03:00 PM Feb 18, 2017 | |

ಧಾರವಾಡ: ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯಲ್ಲಿ ಕಾಲು ಮುರಿತದಿಂದ ಕಿಮ್ಸ್‌ಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಬಳಿಕ ಮೃತಪಟ್ಟ ಚಿಕ್ಕಮಲ್ಲಿಗವಾಡ ಗ್ರಾಮದ ಕುಸ್ತಿಪಟು ಸಂತೋಷ ಹೊಸಮನಿ ಅವರ ಮನೆಗೆ ಸಂಸದ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿದರು. 

Advertisement

ಚಿಕ್ಕಮಲ್ಲಿಗವಾಡ ಗ್ರಾಮದ ಸಂತೋಷ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಸಂಸದರು, ಬಿಜೆಪಿ ಪಕ್ಷದಿಂದ ಒಂದು ಲಕ್ಷ ರೂ. ಹಣ ನೀಡುವುದಾಗಿ ಭರವಸೆ ನೀಡಿದರು. ಬಳಿಕ ಮಾತನಾಡಿದ ಸಂಸದ ಜೋಶಿ, ಓಲಿಂಪಿಕ್ಸ್‌ ಸಮಿತಿ ಕೈಗೊಳ್ಳಬೇಕಿದ್ದ ಮುಂಜಾಗ್ರತೆಯಲ್ಲಿ ಎಡವಿದ್ದು ಮತ್ತು ಬೇಜವಾಬ್ದಾರಿಯಿಂದ ಉತ್ಸಾಹಿ ಕ್ರೀಡಾ ಪಟುವನ್ನು ಕಳೆದುಕೊಂಡಂತಾಗಿದೆ.

ಇದಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಮಂತ್ರಿಗಳು ಕಾರಣ. ಸಮಯಕ್ಕೆ ಸರಿಯಾಗಿ ಕ್ರೀಡಾಪಟುವಿಗೆ ಯೋಗ್ಯ ಚಿಕ್ಸಿತೆ ನೀಡಲು ಕ್ರಮ ಕೈಗೊಳ್ಳದೇ ಹೋಗಿದ್ದರಿಂದ ಒಂದು ಜೀವ ಬಲಿಯಾಗಿದೆ. ಸದ್ಯ ಮೃತ ಕುಟುಂಬ ವರ್ಗಕ್ಕೆ ಸರಕಾರದಿಂದ ಸಹಾಯ ಹಸ್ತ ನೀಡುವ ಜವಾಬ್ದಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲಿದೆ ಎಂದರು. ಮಾಜಿ ಶಾಸಕಿ ಸೀಮಾ ಮಸೂತಿ, ಈರೇಶ ಅಂಚಟಗೇರಿ, ಬಸವರೆಡ್ಡಿ, ಮೋಹನ ರಾಮದುರ್ಗ, ಮಂಜು ಜೋಳಪ್ಪನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next