Advertisement

ರೌಸ್‌ ಅವೆನ್ಯೂ ತೆರವಿಗೆ ಕೇಜ್ರಿಗೆ ದಿಲ್ಲಿ ಪಿಡಬ್ಲ್ಯುಡಿ ನೊಟೀಸ್‌

11:25 AM Apr 13, 2017 | Team Udayavani |

ಹೊಸದಿಲ್ಲಿ : ನಿಯಮ ಉಲ್ಲಂಘನೆಗೈದು ನೀಡಲಾಗಿದ್ದ ದಿಲ್ಲಿಯ ರೌಸ್‌ ಅವೆನ್ಯೂ ಕಟ್ಟಡವನ್ನು ತತ್‌ಕ್ಷಣ ತೆರವುಗೊಳಿಸುವಂತೆ ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರಿಗೆ ದಿಲ್ಲಿ ಸರಕಾರದ ಲೋಕೋಪಯೋಗಿ ಇಲಾಖೆಯು ನೊಟೀಸ್‌ ಜಾರಿ ಮಾಡಿದೆ. 

Advertisement

ರೌಸ್‌ ಅವೆನ್ಯೂ ಕಟ್ಟಡವನ್ನು ಕಾರ್ಯಾಲಯವಾಗಿ ಬಳಸುವುದಕ್ಕೆ ನಿಯಮ ಉಲ್ಲಂಘನೆಗೈದು ನೀಡಲಾಗಿರುವುದನ್ನು ಶುಂಗುÉ ಕಮಿಟಿಯು ಬೆಟ್ಟು ಮಾಡಿ ತೋರಿಸಿದುದನ್ನು ಅನುಸರಿಸಿ ದಿಲ್ಲಿ ರಾಜ್ಯಪಾಲ ಲೆ.ಗವರ್ನರ್‌ ಅನಿಲ್‌ ಬೈಜಾಲ್‌ ಅವರು ಆಪ್‌ ಗೆ ಮಾಡಿದ್ದ  ಆಫೀಸ್‌ ಅಲಾಟ್‌ಮೆಂಟನ್ನು  ರದ್ದು ಪಡಿಸುವ ಆದೇಶವನ್ನು ಹೊರಡಿಸಿದ್ದರು. 

ಕಚೇರಿಯಾಗಿ ಕಟ್ಟಡವನ್ನು ಬಳಸಲಾದ ಕಾರಣಕ್ಕೆ ಆಪ್‌ ನಿಂದ ಪಿಡಬ್ಲ್ಯುಡಿ ಇಲಾಖೆ ಬಾಡಿಗೆ ವಸೂಲಿ ಮಾಡುವುದೇ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಮೂಲಗಳು, ಈ ವಿಷಯ ಈಗ ಪರಿಶೀಲನೆಯಲ್ಲಿದೆ ಎಂದು ತಿಳಿಸಿತು. 

ಈ ಬೆಳವಣಿಗೆಯನ್ನು ದೃಢೀಕರಿಸಿರುವ ಆಪ್‌ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್‌ ಗುಪ್ತಾ ಅವರು “ನೊಟೀಸನ್ನು ಆಪ್‌ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್‌ ಅವರಿಗೆ ಜಾರಿ ಮಾಡಲಾಗಿರುವುದು ಗೊತ್ತಾಗಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next