Advertisement

ಕ್ಷೇತ್ರರಕ್ಷಣೆ ತರಬೇತುದಾರ ಸ್ಥಾನಕ್ಕೆ ಜಾಂಟಿ ರೋಡ್ಸ್‌ ಅರ್ಜಿ

01:08 AM Jul 26, 2019 | Team Udayavani |

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ ಭಾರತದ ಕ್ಷೇತ್ರರಕ್ಷಣಾ ತರಬೇತುದಾರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಸ್ವತಃ ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

Advertisement

ಜಾಂಟಿ ರೋಡ್ಸ್‌ ದಕ್ಷಿಣ ಆಫ್ರಿಕಾ ತಂಡದ ಪರ ಆಡಿದ್ದಾಗ ತಮ್ಮ ಚಾಕಚಕ್ಯತೆಯ ಕ್ಷೇತ್ರರಕ್ಷಣೆಯಿಂದಲೇ ಗಮನ ಸೆಳೆದಿದ್ದರು. 1992ರ ವಿಶ್ವಕಪ್‌ನಲ್ಲಿ ಇವರು ತಮ್ಮ ಇದೇ ಶಕ್ತಿಯಿಂದ ವಿಶ್ವದಾದ್ಯಂತ ಸದ್ದು ಮಾಡಿದ್ದರು. ಸುದೀರ್ಘ‌ ಅವಧಿಗೆ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟದ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್‌ಗೂ ಕ್ಷೇತ್ರರಕ್ಷಣೆ ತರಬೇತುದಾರರಾಗಿ ಕೆಲಸ ಮಾಡಿದ ಅನುಭವ ಜಾಂಟಿ ರೋಡ್ಸ್‌ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next