Advertisement

ಜೋಡಿಹಕ್ಕಿ: ಲವ್‌ ಜೆಹಾದ್‌ ಶಂಕೆ?

11:25 AM Dec 22, 2017 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ನಗರದಲ್ಲಿ ಕಳೆದೆರಡು ದಿನಗಳಿಂದ ಅನುನಾಸ್ಪದವಾಗಿ ಕಂಡು ಬಂದ ಜೋಡಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಸಂಭವಿಸಿದೆ. ಅವರಿಬ್ಬರು ಭಿನ್ನ ಕೋಮಿನ ಯುವತಿ-ಯುವಕರೆಂದು ತಿಳಿದು ಬಂದಿದೆ. ಇದು ಲವ್‌ ಜೆಹಾದ್‌ನ ಸಂಚು ಎಂಬ ಶಂಕೆ ವ್ಯಕ್ತವಾಗಿದೆ.

Advertisement

ದೇಗುಲದ ಮುಂಭಾಗದ ರಥಬೀದಿಯಲ್ಲಿರುವ ಛತ್ರದ ಹೊರಗೆ ಮಧ್ಯವಯಸ್ಕ ಯುವತಿ ಮಂಗಳವಾರದಿಂದ ಏಕಾಂಗಿಯಾಗಿ ವಾಸ್ತವ್ಯ ಹೊಂದಿದ್ದು ನಿರಂತರ ಮೊಬೈಲ್‌ ಕರೆ ಯಲ್ಲಿ ನಿರತಳಾಗಿದ್ದಳು. ಈಕೆ ಬಳಿ ಯುವಕನೋರ್ವ ಆಗಾಗ್ಗೆ ಬಂದು ಮಾತನಾಡಿ ಹೋಗುತ್ತಿದ್ದುದನ್ನು ಛತ್ರ ದಲ್ಲಿದ್ದ ಕೆಲವರು ಗಮನಿಸಿದ್ದಾರೆ. ಅವರಿಬ್ಬರ ನಡವಳಿಕೆ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ದೇಗುಲದ ಪರಿಸರದಲ್ಲಿ ಕಾರ್ಯ ನಿರತ ಭದ್ರತಾ ಸಿಬಂದಿ ಬುಧವಾರ ವಿಚಾರಿಸಿ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ರಾತ್ರಿ ಜೋಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರಿಬ್ಬರು ನಾವು  ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಆದರೆ  ವಿಚಾರಣೆ ವೇಳೆ ಅವರಿಬ್ಬರ ಹೇಳಿಕೆಗಳು ತದ್ವಿರುದ್ಧವಾಗಿ ಕಂಡುಬಂದಿವೆ.  

ಯುವತಿ ಬೆಂಗಳೂರು ಮೂಲದವಳಾಗಿದ್ದು ಪೊಲೀಸರು ಆಕೆಯ ಹೆತ್ತವರ ಸಂಪರ್ಕಿಸಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಯುವಕ ಸುಳ್ಯ ತಾಲೂಕಿನ ಬೆಳ್ಳಾರೆಯ ಪಝಾನ್‌ ಎಂದು ತಿಳಿದು ಬಂದಿದೆ. ಯುವಕ- ಯವತಿಯರಿಬ್ಬರೂ ಪೊಲೀಸ್‌ ವಶದಲ್ಲಿದ್ದಾರೆ. ಸುಬ್ರಹ್ಮಣ್ಯ ಠಾಣೆಯ ಪೊಲೀಸರು ವಿಚಾರಣೆ ನಡಸುತ್ತಿದ್ದು ಇಲ್ಲಿ ತನಕ ಘಟನೆ ಕುರಿತಂತೆ ಯಾವುದೇ ಪ್ರಕರಣ ದಾಖಲುಗೊಂಡಿಲ್ಲ.

ಲವ್‌ ಜೆಹಾದ್‌ ಜಾಲ ಶಂಕೆ?
ಭಕ್ತರ ಸೋಗಿನಲ್ಲಿ ಭಿನ್ನಮತೀಯ ಜೋಡಿಗಳು ಅಕ್ರಮವಾಗಿ ಇಲ್ಲಿಗೆ ಆಗಮಿಸಿ ಇಂತಹ ಕೃತ್ಯಗಳಲ್ಲಿ ತೊಡಗುತ್ತಿರುವುದು ಕಂಡುಬರುತ್ತಿದ್ದು ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಿ ಅನ್ಯಕೋಮಿನ ಯುವಕರು ಲವ್‌ಜೆಹಾದ್‌ ನಡೆಸುತ್ತಿದ್ದಾರೆ. ಈ ಪ್ರಕರಣ ಕೂಡ ಲವ್‌ ಜೆಹಾದ್‌ ಸಂಚಿನ ದ್ದಾಗಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುವಂತೆ ಸಂಘಟನೆಗಳು ಒತ್ತಾಯಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next