Advertisement

ಜ್ಞಾನಂ ಮಕ್ಕಳ ಚಿತ್ರ ಆರಂಭ 

11:56 AM May 09, 2018 | |

ವಸಂತ ಸಿನಿ ಕ್ರಿಯೇಷನ್ಸ್‌ ಲಾಂಛನದಲ್ಲಿ ವೇಣು ಭಾರಧ್ವಾಜ್‌ ಹಾಗೂ ರಾಜ್‌ ಭಾರಧ್ವಾಜ್‌ ಅವರು ನಿರ್ಮಿಸುತ್ತಿರುವ “ಜ್ಞಾನಂ” ಮಕ್ಕಳ ಚಿತ್ರ ಬಾಣಸವಾಡಿಯ ಶ್ರೀಲಕ್ಷಿವೆಂಕಟೇಶ್ವರ ದೇವಸ್ಥಾನದಲ್ಲಿ ಆರಂಭವಾಯಿತು.

Advertisement

ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಿರ್ಮಾಪಕ ವೇಣು ಭಾರಧ್ವಾಜ್‌ ಅವರ  ತಾಯಿ ವಸಂತ ಅವರು ಆರಂಭ ಫ‌ಲಕ ತೋರಿದರು. ಸಹೋದರ ರಾಜ್‌ ಭಾರಧ್ವಾಜ್‌ ಕ್ಯಾಮೆರಾ ಚಾಲನೆ ಮಾಡಿದರು. ವರದರಾಜ್‌ ವೆಂಕಟಸ್ವಾಮಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶನ ಮಾಡುತ್ತಿದ್ದಾರೆ.

ಕೆ.ನಂಜುಂಡ ಅವರ ಬಳಿ ಹಾಗೂ “ನನ್ನ ಪ್ರಕಾರ” ಚಿತ್ರಕ್ಕೆ ನಿರ್ದೇಶನಕ್ಕೆ ಸಹಾಯ ಮಾಡಿ ಅನುಭವವಿರುವ ನಿರ್ದೇಶಕರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಂತೋಷ್‌ ದಯಾಳನ್‌ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ  ರೋಹಿತ್‌ ಸೋವರ್‌ ಸಂಗೀತ ನಿರ್ದೇಶನವಿದೆ. ಚಿತ್ರಕ್ಕೆ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. 

ಸಮಾಜಕ್ಕೆ ಪಾರಿಣಾಮ ಬೀರುವ ಕಥಾ ಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ಶೈಲಶ್ರೀ ಸುದರ್ಶನ್‌, ಪ್ರಣಯ ಮೂರ್ತಿ, ಜ್ಯೋತಿ ಮೂರೂರ, ಮಾಸ್ಟರ್‌ ಧ್ಯಾನ್‌, ಮಾಸ್ಟರ್‌ ರೋಹಿತ್‌, ಸಂಟೋಷ್‌ ಆರ್ಯ, ರಾಧಿಕಾ ಎ ಶೆಟ್ಟಿ, ಸುಕುಮಾರ್‌ ಕೌಂಡಿನ್ಯ, ರಾಮ ರಾವ್‌ ಮುಂತಾದವರಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next