Advertisement

ಜಮ್ಮು ಕಾಶ್ಮೀರ ಸರಕಾರದಿಂದ ಮುಫ್ತಿ ಮೊಹಮ್ಮದ್‌ ಸಯೀದ್‌ ಫೆಲೋಶಿಪ್‌

06:06 PM May 12, 2018 | udayavani editorial |

ಶ್ರೀನಗರ : ಜಮ್ಮು ಕಾಶ್ಮೀರ ಸರಕಾರ ಇಂದು ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಹೆಸರಿನಲ್ಲಿ ಫೆಲೋಶಿಪ್‌ ಆರಂಭಿಸಿದೆ. 

Advertisement

ಇದರಡಿ ರಾಜ್ಯದ 20 ಮಂದಿ ಯುವಕರನ್ನು ಜಾಗತಿಕ ನಾಯಕರನ್ನಾಗಿ ಮಾಡುವ ಗುರಿಯೊಂದಿಗೆ ಪ್ರಮಖ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮುಫ್ತಿ ಮೊಹಮ್ಮದ್‌ ಸಯೀದ್‌ ಗ್ಲೋಬಲ್‌ ಲೀಡರ್ಸ್‌  ಫೆಲೋಶಿಪ್‌ ಕಾರ್ಯಕ್ರಮದಡಿ ರಾಜ್ಯದ ಶಿಕ್ಷಿತ, ಪ್ರತಿಭಾವಂತ ಯುವ ಸಮುದಾಯವನ್ನು ತಲುಪಿ ಅವರನ್ನು ಜಾಗತಿಕ ನಾಯಕರನ್ನಾಗಿ ಮಾಡಲು ಯತ್ನಿಸಲಾಗುವುದು ಎಂದು ಅಧಿಕೃತ ವಕ್ತಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next