Advertisement

ಗುಜರಾತ್‌ ಪೊಲೀಸರು ನನ್ನ ಎನ್‌ಕೌಂಟರ್‌ ಮಾಡಲಿದ್ದಾರೆ: ಮೇವಾನಿ

11:08 AM Feb 24, 2018 | udayavani editorial |

ಹೊಸದಿಲ್ಲಿ : ವಡ್ಗಾಂವ್‌ ಶಾಸಕ ಮತ್ತು ದಲಿತ ಕಾರ್ಯಕರ್ತರಾಗಿರುವ ಜಿಗ್ನೇಶ್‌ ಮೇವಾನಿ ಅವರು ‘ನನಗೆ ಜೀವ ಬೆದರಿಕೆ ಉಂಟಾಗಿದೆ’ ಎಂದಿದ್ದಾರೆ. ಗುಜರಾತ್‌ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಕೊಂದು ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ. 

Advertisement

ನಿನ್ನೆ ಶುಕ್ರವಾರ ಮೇವಾನಿ ಅವರು ಎಡಿಆರ್‌ ಪೊಲೀಸ್‌ ಆ್ಯಂಡ್‌ ಮೀಡಿಯಾ ಎಂಬ ವಾಟ್ಸಾಪ್‌ ಗ್ರೂಪ ಜತೆಗೆ ಚರ್ಚೆ ನಡೆಸಿದ ತರುವಾಯ ಮೇವಾನಿ ಅವರು “ಗುಜರಾತ್‌ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಕೊಂದು ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

ಮೇವಾನಿ ಅವರು ಟ್ಟಿಟರ್‌ನಲ್ಲಿ ಹೀಗೆ ಬರೆದಿದ್ದಾರೆ : ಜಿಗ್ನೇಶ್‌ ಮೇವಾನಿ ಎನ್‌ಕೌಂಟರ್‌ ? ಹೌದು; ನನ್ನನ್ನು ಎನ್‌ಕೌಂಟರ್‌ನಲ್ಲಿ ಹೇಗೆ ಕೊಂದು ಮುಗಿಸಬಹುದು ಎಂಬ ಬಗ್ಗೆ ಇಬ್ಬರು ಉನ್ನತ ಪೊಲೀಸ್‌ ಅಧಿಕಾರಿಗಳು ವಾಟ್ಸಾಪ್‌ ನಲ್ಲಿ ಸಂವಹನ ಮಾಡಿರುವುದನ್ನು ಬಹಿರಂಗಪಡಿಸುವ ವೆಬ್‌ ಪೋರ್ಟಲ್‌ ಲಿಂಕ್‌ ಇಲ್ಲಿದೆ’ . 

ಇದೀಗ ಮೇವಾನಿ ಅವರು ತನಗೆ ಪ್ರಾಣ ಬೆದರಿಕೆ ಇರುವ ಬಗ್ಗೆ ಗುಜರಾತ್‌ ಡಿಜಿಪಿ, ರಾಜ್ಯ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿಗೆ  ದೂರು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next