Advertisement

ಚಿನ್ನಾಭರಣ ಮಳಿಗೆ ದರೋಡೆ

06:08 AM Jun 09, 2020 | Lakshmi GovindaRaj |

ಬೆಂಗಳೂರು: ಚಿನ್ನಾಭರಣ ಮಳಿಗೆಯ ರೋಲಿಂಗ್‌ ಶೆಟರ್‌ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹೈಗ್ರೌಂಡ್ಸ್‌ ಠಾಣಾ ವ್ಯಾಪ್ತಿಯ ಶಿವಾನಂದ ವೃತ್ತದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.  ಗಜೇಂದ್ರ ಎಂಬವರಿಗೆ ಸೇರಿದ ಚಿರಾಗ್‌ ಆಭರಣ ಮಳಿಗೆಯಲ್ಲಿ ಘಟನೆ ನಡೆದಿದ್ದು, ಒಂದು ಕೆ.ಜಿ. ಚಿನ್ನ, 3 ಕೆ.ಜಿ. ಬೆಳ್ಳಿ, ವಜ್ರ ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಭಾನುವಾರ  ತಡರಾತ್ರಿ ಎರಡು ಗಂಟೆ ಸುಮಾರಿಗೆ ಚಿನ್ನಾಭರಣ ಮಳಿಗೆಯ ರೋಲಿಂಗ್‌ ಶೆಟರ್‌ ಅನ್ನು ಗ್ಯಾಸ್‌ ಕಟರ್‌ ನಿಂದ ಕತ್ತರಿಸಿ, ಒಳ ನುಗ್ಗಿರುವ ಕಳ್ಳರು, ಅಂಗಡಿಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಿಸಿ ಕ್ಯಾಮೆರಾ ಒಡೆದು  ಹಾಕಿದ್ದು, ವೈರ್‌ ಕತ್ತರಿಸಿ, ಹಾರ್ಡ್‌ ಡಿಸ್ಕ್ ಧ್ವಂಸ ಮಾಡಿದ್ದಾರೆ. ಮುಖ್ಯ ಲಾಕರ್‌ ಒಡೆಯಲು ಸಾಧ್ಯವಾಗಿಲ್ಲ. ಕೊನೆಗೆ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಮಳಿಗೆಯ ಸಿಸಿಕ್ಯಾಮೆರಾದಲ್ಲಿ ಇಬ್ಬರು  ಆರೋಪಿಗಳು  ಹೊರಗೆ ಭದ್ರತೆಯಲ್ಲಿದ್ದು, ಇತರರು ಒಳಗೆ ನುಗ್ಗಿರುವುದು ಗೊಚರಿಸಿದೆ. ಸ್ಥಳಕ್ಕೆ ಧಾವಿಸಿದ ಹೈಗ್ರೌಂಡ್ಸ್‌ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚುಗಾರರ ತಂಡದ ಜತೆ ಪರಿಶೀಲಿಸಿದ್ದಾರೆ. ಬಳಿಕ ಗಜೇಂದ್ರ ಅವರು ನೀಡಿದ ದೂರಿನ ಅನ್ವಯ  ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next