Advertisement

ಚಿನ್ನದಂಗಡಿ ಮಾಲೀಕನ ಮೇಲೆಗುಂಡು ಹಾರಿಸಿ ಆಭರಣ ಲೂಟಿ

07:41 AM Jan 29, 2019 | Team Udayavani |

ಕಲಬುರಗಿ: ಜಿಲ್ಲೆಯ ನೂತನ ಕಮಲಾಪುರ ತಾಲೂಕು ಕೇಂದ್ರದಲ್ಲಿನ ಬಸವೇಶ್ವರ ವೃತ್ತದಲ್ಲಿ ಸೋಮವಾರ ಸಂಜೆ ಬೈಕ್‌ ಮೇಲೆ ಬಂದ ಇಬ್ಬರೂ ಅಪರಿಚಿತರು ಸಂಗಮೇಶ್ವರ ಜ್ಯುವೆಲರಿ ಶಾಪ್‌ಗೆ ನುಗ್ಗಿ ಮಾಲೀಕನ ಮೇಲೆ ಗುಂಡು ಹಾರಿಸಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾದ ಘಟನೆ ನಡೆದಿದೆ.

Advertisement

ಗುಂಡಿನ ದಾಳಿಯಲ್ಲಿ ಅಂಗಡಿ ಮಾಲೀಕ ವಿಜಯಕುಮಾರ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿನ್ನಾಭರಣ ಖರೀದಿ ನೆಪದಲ್ಲಿ ಅಂಗಡಿಗೆ ಬಂದ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ವಿಜಯಕುಮಾರ ಇತ್ತೀಚೆಗಷ್ಟೆ ಬಂಗಾರದ ಅಂಗಡಿ ಪ್ರಾರಂಭಿಸಿದ್ದರು. ಇದೊಂದು ಚಿಕ್ಕ ಅಂಗಡಿಯಾಗಿದ್ದು, ಬಂಗಾರದ ಆಭರಣ ತಯಾರಿಸಲಾಗುತ್ತಿತ್ತು ಎಂದು ಎಸ್‌ಪಿ ಎನ್‌.ಶಶಿಕುಮಾರ ತಿಳಿಸಿದ್ದಾರೆ.

ಗುಂಡಿನ ದಾಳಿಗೆ ಹಳೆ ವೈಷಮ್ಯ ಕಾರಣವೋ ಅಥವಾ ಲೂಟಿಗಾಗಿ ನಡೆದಧ್ದೋ ಎಂಬುವುದು ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ವಿಜಯಕುಮಾರ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಘಟನೆ ವಿವರ ಬಹಿರಂಗಗೊಳ್ಳುವ ಸಾಧ್ಯತೆಯಿದೆ. ಎಸ್‌ಪಿ ನ್‌. ಶಶಿಕುಮಾರ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಗ್ರಾಮೀಣ ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರ, ಗ್ರಾಮೀಣ ಸಿಪಿಐ ರಾಘವೇಂದ್ರ , ಕಮಲಾಪುರ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next