Advertisement

ಶೃಂಗೇರಿ: ಹಾಡಹಗಲೇ ಲಾಂಗ್ ತೋರಿಸಿ ಚಿನ್ನದ ಅಂಗಡಿಯಲ್ಲಿ ದರೋಡೆ

03:51 PM Aug 12, 2020 | sudhir |

ಚಿಕ್ಕಮಗಳೂರು : ಲಾಂಗ್ ತೋರಿಸಿ ಚಿನ್ನದ ಅಂಗಡಿಯಲ್ಲಿ ಮೂರು ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾದ ಘಟನೆ ಶೃಂಗೇರಿ ನಗರದಲ್ಲಿ ನಾಗಪ್ಪ ಶೆಟ್ಟಿ ಎಂಬುವವರ ಅಂಗಡಿಯಲ್ಲಿ ಬುಧವಾರ ನಡೆದಿದೆ.

Advertisement

ಮುಖಕ್ಕೆ ಮಾಸ್ಕ್ ಧರಿಸಿ ನಾಗಪ್ಪ ಶೆಟ್ಟಿ ಎಂಬುವವರ ಚಿನ್ನದ ಅಂಗಡಿಗೆ ಬಂದ ವ್ಯಕ್ತಿ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಮಹಿಳಾ ಸಿಬ್ಬಂದಿಗಳಿಗೆ ಮಾರಕಾಸ್ತ್ರ ತೋರಿಸಿ ದರೋಡೆ ನಡೆಸಲು ಮುಂದಾಗಿದ್ದಾನೆ ಅಷ್ಟು ಹೊತ್ತಿಗೆ ಇನ್ನೋರ್ವ ಮಹಿಳಾ ಸಿಬ್ಬಂದಿ ದರೋಡೆಕೋರನ ಮೇಲೆ ಚೇರ್ ನಿಂದ ಹೊಡೆಯಲು ಯತ್ನಿಸಿದ್ದು ಈ ವೇಳೆ ಕಳ್ಳ ಅಲ್ಲಿ ಇದ್ದ ಮೂರು ಚಿನ್ನದ ಸರದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಹಿಳೆಯ ಹಾಗೂ ಮಾಲೀಕರ ಸಮಯ ಪ್ರಜ್ಞೆಯಿಂದ ದೊಡ್ಡ ಮಟ್ಟದಲ್ಲಿ ಆಗುವ ದರೋಡೆಯೊಂದು ತಪ್ಪಿದಂತಾಗಿದೆ.

ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳನ ಪತ್ತೆಗೆ ಬಲೆ ಬಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next