Advertisement

ಯೋಧರಿಗೆ “ಬದ್ಧತಾ ಉಂಗುರ’ದ ಉಡುಗೊರೆ: ಪುಣೆಯ ಆಭರಣ ಕಂಪನಿಯಿಂದ ಈ ಗಿಫ್ಟ್

06:26 PM Jul 15, 2022 | Team Udayavani |

ಪುಣೆ:ಪುಣೆ ಮೂಲದ ಆಭರಣ ತಯಾರಕ ಕಂಪನಿ ಬೋನಿಸಾ “ಏಕ್‌ ಇಂಡಿಯಾ ಮಿಷನ್‌’ ಎಂಬ ವಿನೂತನ ಯೋಜನೆಯೊಂದನ್ನು ಘೋಷಿಸಿದೆ. ಅದರಂತೆ, ದೇಶ ಕಾಯುವ ಯೋಧರಿಗೆ ಈ ಸಂಸ್ಥೆಯು “ಬೆಳ್ಳಿ, ಬಂಗಾರ, ವಜ್ರ ಮತ್ತು ವಿವಿಧ ರಾಜ್ಯಗಳ ಮಣ್ಣನ್ನು ಬಳಸಿ ತಯಾರಿಸಿದ ಉಂಗುರ’ವನ್ನು ಉಡುಗೊರೆಯಾಗಿ ನೀಡಲಿದೆ. ಈ ಉಂಗುರಕ್ಕೆ “ಬದ್ಧತಾ ಉಂಗುರ'(ಕಮಿಟ್‌ಮೆಂಟ್‌ ರಿಂಗ್‌) ಎಂದು ಹೆಸರಿಡಲಾಗಿದೆ.

Advertisement

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ 7,500 ಯೋಧರಿಗೆ ಈ ಉಂಗುರದ ಗಿಫ್ಟ್ ಸಿಗಲಿದೆ. ಈ ಯೋಜನೆಯ ಅಂಗವಾಗಿ ಗುರುವಾರ ಖಾಡ್ಕಿಯ ಪ್ಯಾರಾಪ್ಲೆಜಿಕ್‌ ರಿಹ್ಯಾಬಿಲಿಟೇಷನ್‌ ಸೆಂಟರ್‌ನ 88 ಹಿರಿಯ ಸೈನಿಕರಿಗೆ “ಏಕ್‌ ಇಂಡಿಯಾ ರಿಂಗ್‌’ಗಳನ್ನು ವಿತರಿಸಲಾಗಿದೆ.

ಏನಿದರ ವಿಶೇಷ?
“ಬೆಳ್ಳಿಯು ನಮ್ಮನ್ನು ಶಾಂತವಾಗಿಡುವಂಥದ್ದು, ಬಂಗಾರವು “ಭಾರತದ’ ಸಂಕೇತ, ಪ್ರತಿಯೊಂದು ರಾಜ್ಯದ ಮಣ್ಣು ಏಕತೆಯ ಸಂಕೇತ. ಇನ್ನು, ದೇಶದಲ್ಲಿರುವ ನಾವೆಲ್ಲರೂ “ವಜ್ರ’ದಂತೆ ಎಂಬ ಕಾರಣಕ್ಕೆ ವಜ್ರವನ್ನು ಬಳಸಿದ್ದೇವೆ’ ಎಂದು ಬೋನಿಸಾ ಕಂಪನಿಯ ಪಾಲುದಾರ ಸಂಕೇತ್‌ ಬಿಯಾನಿ ಹೇಳಿದ್ದಾರೆ.

ಉಂಗುರವನ್ನು ಬೆಳ್ಳಿಯಲ್ಲಿ ಮಾಡಲಾಗಿದೆ. ಅದರ ಮೇಲೆ “ಭಾರತ’ ಎಂದು ಚಿನ್ನದಲ್ಲಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next