Advertisement

Theft Case: ಮನೆಯಿಂದ ಚಿನ್ನಾಭರಣ ಕಳವು

10:07 PM May 16, 2024 | Team Udayavani |

ಮಂಗಳೂರು: ಮನೆಯವರು ಯಕ್ಷಗಾನ ನೋಡಲು ಹೋಗಿದ್ದ ವೇಳೆ ಕಳ್ಳರು ಮನೆಯಿಂದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ನಗರದ ಕಂಕನಾಡಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಗುರಿ ಗುಡ್ಡೆತೋಟದಲ್ಲಿ ನಡೆದಿದೆ.

Advertisement

ಮೇ 10ರಂದು ಅಪರಾಹ್ನ 3.45ಕ್ಕೆ ಮನೆಯವರು ಮೂಲ್ಕಿಗೆ ಯಕ್ಷಗಾನ ನೋಡುವುದಕ್ಕೆಂದು ಹೋಗಿ ಮರುದಿನ ಸಂಜೆ ಮನೆಗೆ ವಾಪಸಾಗಿದ್ದರು. ಆಗ ಮನೆಯಲ್ಲಿದ್ದ 16 ಗ್ರಾಂ ತೂಕದ ಅಂದಾಜು 95,000 ರೂ. ಮೌಲ್ಯದ ಚಿನ್ನದ ಬಳೆ, ಎಚ್‌ಪಿ ಕಂಪೆನಿಯ ಲ್ಯಾಪ್‌ಟಾಪ್‌, 10,000 ರೂ. ನಗದು, ಬೆಳ್ಳಿಯ ತಟ್ಟೆ, ಬ್ರೇಸ್‌ಲೆಟ್‌ ಮೊದಲಾದವುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next