Advertisement

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: JEE ಅಡ್ವಾನ್ಸ್ ಡ್ ತಪ್ಪಿಸಿಕೊಂಡವರಿಗೆ ಈ ಬಾರಿ ಅವಕಾಶ

08:54 PM Jul 02, 2021 | Team Udayavani |

ನವದೆಹಲಿ: ಐಐಟಿ ಕೋರ್ಸ್‌ಗಳಿಗೆ ಸೇರ್ಪಡೆಯಾಗಲು ಬಯಸುವ ವಿದ್ಯಾರ್ಥಿಗಳಿಗೆ ಒಂದು ಸಿಹಿಸುದ್ದಿಯಿದೆ. ಕಳೆದವರ್ಷ ಜೆಇಇ ಅಡ್ವಾನ್ಸಡ್‌ ಐಐಟಿ ಕೋರ್ಸ್‌ಗಳಿಗೆ ಸೇರಿಕೊಳ್ಳಲು ಯಾವುದಾದರೂ ಕಾರಣಗಳಿಗಾಗಿ ಸಾಧ್ಯವಾಗದೇ ಇದ್ದರೆ, ಅವರು ಈ ಬಾರಿ ಪಾಲ್ಗೊಳ್ಳಬಹುದು. ಕೊರೊನಾ ಕಾರಣಕ್ಕೆ ಇದೊಂದು ವರ್ಷ ವಿನಾಯ್ತಿ ನೀಡಲಾಗಿದೆ.

Advertisement

ಅಂದರೆ ಕಳೆದವರ್ಷ ಪರೀಕ್ಷೆಗೆ ಹಾಜರಾಗಲಾಗದಿದ್ದರೆ, ಅನುತ್ತೀರ್ಣರಾಗಿದ್ದರೆ ಈ ಬಾರಿ ಅಡ್ವಾನ್ಸಡ್‌ ಹಂತಕ್ಕೆ ಸೇರಿಕೊಳ್ಳಬಹುದು.

ತಜ್ಞರ ಪ್ರಕಾರ, ಹೆಚ್ಚುವರಿಯಾಗಿ ಈ ವರ್ಷ ಪರೀಕ್ಷೆಗೆ ಕೂರುವವರು ಕೇವಲ 10,000 ಮಂದಿ ಮಾತ್ರ. ಹಾಗಾಗಿ ಹೇಳಿಕೊಳ್ಳುವಷ್ಟು ಸ್ಪರ್ಧೆ ಎದುರಾಗುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಈ ಹಿಂದೆ ಅಡ್ವಾನ್ಸಡ್‌ ಹಂತವನ್ನು ತಪ್ಪಿಸಿಕೊಂಡಿದ್ದರೆ, ನಿರೀಕ್ಷಿತ ಸಾಧನೆ ಮಾಡದಿದ್ದರೆ ಅವರು ಮುಂದಿನವರ್ಷ ಮತ್ತೆ ಜೆಇಇ ಮುಖ್ಯಸುತ್ತಿನ ಪರೀಕ್ಷೆಗೆ ಹಾಜರಾಗಬೇಕಿತ್ತು.

ಇದನ್ನೂ ಓದಿ : ಉಪಚುನಾವಣೆಯ ಬಗ್ಗೆ ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳುತ್ತೇನೆ : ತಿರಥ್ ಸಿಂಗ್ ರಾವತ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next