Advertisement

Politics: ಜೆಡಿಎಸ್‌ ಜಗಳ ತಾರಕಕ್ಕೆ

12:29 AM Oct 18, 2023 | Team Udayavani |

ಬೆಂಗಳೂರು: ಜೆಡಿಎಸ್‌ ಒರಿಜಿನಲ್‌ ಜಗಳ ಜೋರಾಗಿದ್ದು, ನಮ್ದೇ ಒರಿಜನಲ್‌ ಜೆಡಿಎಸ್‌ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಕ್ಕೆ, ಅವರದ್ದೇ ಒರಿಜನಲ್‌ ಆಗಿದ್ದರೆ ಬೋರ್ಡ್‌ ಹಾಕಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇದರ ನಡುವೆ ಇಬ್ರಾಹಿಂ ಹೇಳಿದ್ದು ಸರಿ ಎಂದು “ಒರಿಜಿನಲ್‌’ ಜಗಳಕ್ಕೆ ಕಾಂಗ್ರೆಸ್‌ ತುಪ್ಪ ಸುರಿದಿದ್ದರೆ, ಇಬ್ರಾಹಿಂ ಸಾಹೇಬ್ರು ನಮ್ದೇ ಒರಿಜಿನಲ್‌ ಅಂತ ಹೇಳಿದ್ದಾರೆ, ಆದ್ರೆ ಅವರು ಜೆಡಿಎಸ್‌ನಲ್ಲಿ ಲೆಕ್ಕಕ್ಕೆ ಇಲ್ಲ ಎಂದು ಹೇಳಿ ಮಾಜಿ ಡಿಸಿಎಂ ಆರ್‌. ಅಶೋಕ್‌ “ದೋಸ್ತಿ’ ನಿಭಾಯಿಸಿದ್ದಾರೆ.

Advertisement

ಸಿ.ಎಂ. ಇಬ್ರಾಹಿಂ ಮಾತಿಗೆ ಮರುಳಾಗಬೇಡಿ, ಜೆಡಿಎಸ್‌ ವರಿಷ್ಠರು ನಿಮ್ಮ ಜತೆಗಿದ್ದಾರೆ ಎಂದು ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಶಾಸಕರಿಗೆ ಅಭಯ ನೀಡಿದ್ದಾರೆ. ಜೆಡಿಎಸ್‌ ಇಬ್ಭಾಗ ಮಾಡುವ ಗಂಡಸು ಹುಟ್ಟೇ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಹೇಳಿದ್ದರೆ, ನಮೆª ಒರಿಜನಲ್‌ ಜೆಡಿಎಸ್‌ ಎಂದು ಹೇಳುತ್ತಿರುವ ಇಬ್ರಾಹಿಂ, ಎದೆ ಮುಟ್ಟಿ ನೋಡಿಕೊಳ್ಳಲಿ ಎಂದು ಶಾಸಕ ಸಮೃದ್ಧಿ ಮಂಜುನಾಥ್‌ ಸವಾಲು ಹಾಕಿದ್ದಾರೆ. ನಾನು ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿದ್ದರೆ ಕುಮಾರಸ್ವಾಮಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತಿದ್ದೆ ಎಂದು ವಿ. ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದ್ದಾರೆ.

“ನಕಲಿ ಉಚ್ಚಾಟನೆ”; ಇಬ್ರಾಹಿಂ ದೂರು
ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಯುವ ಘಟಕ ರಾಜ್ಯಾಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಅವರ ನಕಲಿ ಉಚ್ಚಾಟನೆ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪೊಲೀಸರಿಗೆ ಅಸಲಿ ದೂರು ನೀಡಿದ್ದಾರೆ. ಕೆಲವು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಇಬ್ರಾಹಿಂ ಹೇಳಿದ್ದಾರೆ.

ಜೆಡಿಎಸ್‌ನ ಎಲ್ಲ ಬಿಕ್ಕಟ್ಟುಗಳನ್ನೂ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ತೀರ್ಮಾನ ಮಾಡುತ್ತಾರೆ. ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ಗೆ ಹೋಗೋದಾದರೆ ಹೋಗಲಿ. ನಮ್ಮದೇನೂ ಅಭ್ಯಂತರವಿಲ್ಲ. ಜೆಡಿಎಸ್‌ ಇಬ್ಭಾಗ ಆಗಲ್ಲ, ನಾವು 19 ಜನ ಎಂಎಲ್‌ಎಗಳು, ಪಕ್ಷದ ಜಿಲ್ಲಾಧ್ಯಕ್ಷರು ಒಟ್ಟಾಗಿದ್ದೇವೆ.
– ಎಚ್‌.ಡಿ. ರೇವಣ್ಣ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next