Advertisement

ಸಂಘಟನೆ ನಡುವೆಯೇ ಜೆಡಿಎಸ್‌ನಲ್ಲಿ ಭಿನ್ನರಾಗ

12:47 AM Jan 20, 2021 | Suhan S |

ಬೆಂಗಳೂರು: 2023ರ ವೇಳೆಗೆ ಸ್ವಂತ ಬಲದಲ್ಲಿ ಸರಕಾರ ರಚಿಸುವ ಗುರಿಯೊಂದಿಗೆ ಸಂಘಟನೆಯತ್ತ  ಗಮನ ಹರಿಸಿರುವಾಗ ಜೆಡಿಎಸ್‌ ನಲ್ಲಿ ಆಂತರಿಕ ಕಲಹ ಹೆಚ್ಚುತ್ತಿದ್ದು, ನಾಯಕರು ವಾಕ್ಸಮರದಲ್ಲಿ  ತೊಡಗಿಕೊಂಡಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಹಾಗೂ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡರ ನಡುವೆ ಮಾತಿನ ಸಮರ  ತಾರಕ್ಕೇರುವ ಲಕ್ಷಣ ಕಾಣುತ್ತಿದೆ. ಈ ನಡುವೆ ಏನಾದರೂ ಸಮಸ್ಯೆಗಳಿದ್ದರೆ ವರಿಷ್ಠರಾದ ಎಚ್‌.ಡಿ.ದೇವೇಗೌಡರ ಬಳಿಗೆ ಬಂದು ಚರ್ಚಿ ಸಲಿ ಎನ್ನುವ ಮೂಲಕ ಬಹಿರಂಗವಾಗಿ ಹೇಳಿಕೆ ನೀಡದಂತೆ ಕುಮಾರಸ್ವಾಮಿ ಅವರು ಜಿ.ಟಿ ದೇವೇಗೌಡರಿಗೆ ಸಂದೇಶ ರವಾನಿಸಿದ್ದಾರೆ.

ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಬಗ್ಗೆ  ಕುಮಾರಸ್ವಾಮಿ ಅವರು ಸೋಮವಾರ ನಡೆದ ಪ್ರಮುಖರ ಸಭೆಯಲ್ಲಿ ಖಾರವಾಗಿಯೇ ಮಾತನಾಡಿದ್ದರು.  “ರೋಗವಿದ್ದರೆ ಔಷಧ ನೀಡಬಹುದು, ರೋಗವಿರುವಂತೆ ನಟಿಸುವವರಿಗೆ ಔಷಧ ಕೊಡುವುದು ಕಷ್ಟ’ ಎಂಬುದಾಗಿ ವ್ಯಂಗ್ಯವಾಡಿ ದ್ದರು. ಇದಕ್ಕೆ ಮೈಸೂರಿನಲ್ಲಿ ಮಂಗಳವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜಿಟಿಡಿ ಅವರು, ನಟನೆ ಮಾಡುವುದನ್ನು ಎಚ್‌.ಡಿ. ಕುಮಾರಸ್ವಾಮಿಯವರಿಂದಲೇ ಕಲಿಯಬೇಕು ಎಂದಿದ್ದಾರೆ.

ಕುಮಾರಸ್ವಾಮಿಯವರು  ನನ್ನ ಸಹಾಯ ಹಾಗೂ  ಚಾಮುಂಡೇಶ್ವರಿ ಆಶೀ ರ್ವಾದದಿಂದ  ಮುಖ್ಯ ಮಂತ್ರಿಯಾದರು. ಅವರನ್ನು ಪದಚ್ಯುತಿಗೊಳಿಸುವ ಕಾರ್ಯವನ್ನು ಎಂದಿಗೂ ಮಾಡಿಲ್ಲ. ಅಧಿಕಾರಕ್ಕೆ ಆಸೆಪಡುವವನಾಗಿದ್ದರೆ ಸಚಿವನಾಗಿ ಮೆರೆಯಬಹುದಿತ್ತು. ಇನ್ನೆರಡು ವರ್ಷ ಶಾಸಕನಾಗಿ ಮುಂದುವರಿದು, ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ, ಬೇಡವೋ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಜೆ.ಡಿ.ದೇವೇಗೌಡರು ಹೇಳಿದ್ದಾರೆ.

ಈ ಬಗ್ಗೆ ಚನ್ನಪಟ್ಟಣದಲ್ಲಿ ಮಂಗಳವಾರ ಕುಮಾರಸ್ವಾಮಿ ಮತ್ತೂಮ್ಮೆ ಪರೋಕ್ಷವಾಗಿ ಕುಟುಕಿದ್ದಾರೆ. ಪಕ್ಷ ಸಂಘಟನೆಯಲ್ಲಿ ಆಸಕ್ತಿ ಇಲ್ಲ ಎಂದು ಅವರೇ ಹೇಳಿರುವುದರಿಂದ ಪಕ್ಷ ಕಟ್ಟುವವರಿಗೆ ಅವಕಾಶ ನೀಡಲಾಗಿದೆ. ಕೇವಲ ವಿಸಿಟಿಂಗ್‌ ಕಾರ್ಡ್‌ಗಾಗಿ ಅವಕಾಶ ಕೊಡಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.

Advertisement

ಪ್ರಮುಖ ನಾಯಕರ ವಾಕ್ಸಮರದಿಂದ ಪಕ್ಷಕ್ಕೆ ಹಾನಿಯಾಗುವುದನ್ನು ತಡೆಯಲು ಮುಂದಾ ಗಿರುವ ಜೆಡಿಎಸ್‌ನ ಕೆಲವು ನಾಯಕರು, ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಯಾರೂ ಪಕ್ಷ ಬಿಡುವುದಿಲ್ಲ ಎನ್ನುತ್ತಾ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಅಂತೂ ಒಂದು ಕಡೆ ಸಂಘಟನೆಗಾಗಿ ಶ್ರಮಿಸುವ ಜೆಡಿಎಸ್‌ನಲ್ಲಿ ಈ ಮಟ್ಟಕ್ಕೆ ಭಿನ್ನರಾಗ ಕೇಳಿ ಬರುತ್ತಿರುವುದು ಇತರ ನಾಯಕರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಇರಿಸುಮುರಿಸು ಉಂಟುಮಾಡಿದೆ.

ಎಚ್‌ಡಿಡಿ ಜತೆ ಮಾತಾಡಲಿ  :

ಜಿಟಿಡಿ ಅವರು ವಯಸ್ಸಾಗಿದೆ ಎಂಬ ಕಾರಣ ನೀಡುವುದು ಸರಿಯಲ್ಲ.   ಹೊರಟ್ಟಿಗೂ ವಯಸ್ಸಾ ಗಿದೆ. ಆದರೂ ಅವರು ಪಕ್ಷ ಸಂಘ ಟನೆಗೆ ಶ್ರಮಿಸುತ್ತಿದ್ದಾರೆ. ಎಲ್ಲೋ ಹೇಳಿಕೆ ಕೊಡುವುದು ಬೇಡ. ಎಚ್‌.ಡಿ. ದೇವೇ ಗೌಡರ ಮನೆ ಬಾಗಿಲು 24 ಗಂಟೆಯೂ ತೆರೆದಿರುತ್ತದೆ. ಬಂದು ಮಾತನಾಡಲಿ. ಮಾಧ್ಯಮಗಳ ಮೂಲಕ ನನಗೆ ಸಂದೇಶ ನೀಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ. ಇದರಿಂದ ವಾಕ್ಸಮರ ಹೆಚ್ಚುವ ಲಕ್ಷಣ ಕಾಣುತ್ತಿದೆ.

ಪಕ್ಷ ಸಂಘಟನೆಗಾಗಿ ರಚನೆ  ಆಗಿರುವ ವೀಕ್ಷಕರ ತಂಡದಲ್ಲಿ ಜಿ.ಟಿ.ದೇವೇ ಗೌಡ, ಮಧು ಬಂಗಾರಪ್ಪ ಅವರ ಹೆಸರಿಲ್ಲ ಎಂದಾಕ್ಷಣ ಅವರು ಪಕ್ಷ ಬಿಡುತ್ತಾರೆಂದು ಅರ್ಥವಲ್ಲ. ಇಬ್ಬರೂ ಪಕ್ಷದಲ್ಲೇ ಇದ್ದಾರೆ. ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತ್ಯಜಿಸುತ್ತಾರೆ ಎನ್ನಲಾಗುತ್ತಿತ್ತು. ಇತ್ತೀಚೆಗೆ ನಡೆದ ಸಭೆಯಲ್ಲಿ ಅವರು ಪಾಲ್ಗೊಂಡಿರಲಿಲ್ಲವೇ? ಕೆಲವರಿಗಿರುವ ಸಣ್ಣಪುಟ್ಟ ಅಸಮಾಧಾನಗಳನ್ನು ವರಿಷ್ಠರಾದ ಎಚ್‌.ಡಿ.ದೇವೇಗೌಡರು ಹಾಗೂ  ಎಚ್‌.ಡಿ. ಕುಮಾರಸ್ವಾಮಿಯವರು ಬಗೆಹರಿಸುತ್ತಾರೆ.  –ಬಂಡೆಪ್ಪ ಕಾಶೆಂಪೂರ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next