Advertisement

ಫೆಬ್ರವರಿ ಅಂತ್ಯಕ್ಕೆ ಜೆಡಿಎಸ್‌ ಭಿನ್ನಮತೀಯ ಶಾಸಕರು ಕಾಂಗ್ರೆಸ್‌ಗೆ 

06:30 AM Jan 12, 2018 | Team Udayavani |

ಕೊಟ್ಟೂರು : ನಾನು ಸಹಿತ ಜೆಡಿಎಸ್‌ನ ಭಿನ್ನಮತೀಯ 7  ಶಾಸಕರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ  ಫೆಬ್ರವರಿ 26 ಅಥವಾ 28ರಂದು ಕಾಂಗ್ರೆಸ್‌ ಸೇರುವುದು ಖಚಿತ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಎಸ್‌. ಭೀಮಾನಾಯ್ಕ ತಿಳಿಸಿದರು. 

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸೇರ್ಪಡೆಗೆ ಈಗಾಗಲೇ ಹೈಕಮಾಂಡ್‌ ಒಪ್ಪಿಗೆ ಸೂಚಿಸಿದೆ. ಕಾಂಗ್ರೆಸ್‌ನ ಹಿಂದಿನ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್‌ ಹಾಗೂ ಹಾಲಿ ಉಸ್ತುವಾರಿ ವೇಣುಗೋಪಾಲ್‌ ಅವರೊಂದಿಗೆ ಕಾಂಗ್ರೆಸ್‌ ಸೇರ್ಪಡೆ ಕುರಿತು ಚರ್ಚಿಸಿದ್ದೇವೆ ಎಂದರು. ಶಾಸಕ ಜಮೀರ್‌ ಅಹಮದ್‌, ಚೆಲುವರಾಯ ಸ್ವಾಮಿ ನೇತೃತ್ವದಲ್ಲಿ ನಾವು ಕಾಂಗ್ರೆಸ್‌ ಸೇರಲಿದ್ದು, ಸೇರ್ಪಡೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ ಎಂದರು. 

ರಾಹುಲ್‌ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತಿತರರಿಂದ ಎಲ್ಲ ಏಳೂ ಶಾಸಕರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಖಾತರಿ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಟಿಕೆಟ್‌ ನಿರಾಕರಣೆಯ ಮಾತೇ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next