Advertisement

ಜೆಡಿಎಸ್‌ ತೊರೆಯಲಾರೆ:ಶಾಸಕ ನಾರಾಯಣಗೌಡ

01:25 AM Feb 17, 2019 | Team Udayavani |

ಕೆ.ಆರ್‌.ಪೇಟೆ: “ನಾನು ಜೆಡಿಎಸ್‌ ಬಿಡುತ್ತೇನೆಂದು ಸ್ವಪಕ್ಷ ಹಾಗೂ ಪ್ರತಿಪಕ್ಷದವರು ಕನಸು ಕಾಣುತ್ತಿದ್ದಾರೆ. ಅವರ ಕನಸು ಭಗ್ನವಾಗುತ್ತದೆ. ನಾನು ಕೊನೆಯವರೆಗೂ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಜೀವನ ನಡೆಸುತ್ತೇನೆ’ ಎಂದು ಶಾಸಕ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. 

Advertisement

ಸುದ್ದಿಗಾರರ ಜತೆ ಮಾತನಾಡಿ, “ನಾನು ಅನಾರೋಗ್ಯದಿಂದ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೆ.ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಿದ್ದೆ. ಆದರೂ, ಕೆಲವರು ನನ್ನ ವಿರುದಟಛಿ ಸುಳ್ಳು ಸುದ್ದಿ ಹಬ್ಬಿಸಿ ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಮುಂದಾಗಿದ್ದರು. ಅವರಲ್ಲಿ ಜೆಡಿಎಸ್‌ನವರೂ ಇದ್ದಾರೆ. ನಾನು ಜೆಡಿಎಸ್‌ ಪಕ್ಷ ಬಿಡುತ್ತೇನೆಂದು ಅವರೆಲ್ಲ ಕನಸು ಕಾಣುತ್ತಿದ್ದಾರೆ. ಆದರೆ, ನಾನು ಜೆಡಿಎಸ್‌ ತೊರೆಯುವುದಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next