Advertisement

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: L.V.ಅಮೀನ್‌ರಿಗೆ ಸಮ್ಮಾನ

02:34 PM Sep 12, 2017 | Team Udayavani |

ಮುಂಬಯಿ: ಕನ್ನಡ ಸಂಘ ಸಾಂತಾಕ್ರೂಜ್‌ ಇದರ ನೂತನ  ಅಧ್ಯಕ್ಷರಾಗಿ ನಿರಂತರ ಏಳನೇ ಬಾರಿಗೆ ಪುನರಾಯ್ಕೆಗೊಂಡ ಉದ್ಯಮಿ, ಸಮಾಜ ಸೇವಕ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ ಉಪಾಧ್ಯಕ್ಷರೂ ಆಗಿರುವ ಎಲ್‌. ವಿ. ಅಮೀನ್‌ ಅವರನ್ನು ಸೆ. 8ರಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಸಾಂತಾಕ್ರೂಜ್‌ ಪೂರ್ವ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಗೌರವಿಸಿ ಅಭಿನಂದಿಸಲಾಯಿತು.

Advertisement

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಶ್ರೀಕೃಷ್ಣ ಎ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಮಿತಿಯ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸರಳ ಸಮಾರಂಭದಲ್ಲಿ ಎಲ್‌. ವಿ. ಅಮೀನ್‌ ಅವರನ್ನು  ಅಭಿನಂದಿಸಿ ಗೌರವಿಸಿ ಶುಭಹಾರೈಸಲಾಯಿತು.

ಸಮಿತಿಯ ಉಪಾಧ್ಯಕ್ಷರುಗಳಾದ ನಿತ್ಯಾನಂದ ಕೋಟ್ಯಾನ್‌, ಪಿ. ಧನಂಜಯ ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ತುಳಸಿದಾಸ್‌ ಅಮೀನ್‌, ರವಿರಾಜ್‌ ಕಲ್ಯಾಣು³ರ್‌, ಗೌರವ ಕಾರ್ಯದರ್ಶಿ ತೋನ್ಸೆ ಸಂಜೀವ ಪೂಜಾರಿ, ಜೊತೆ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್‌, ಸದಸ್ಯರುಗಳಾದ ಮಿನಿರಾಜ್‌ ಜೈನ್‌, ರವಿ ದೇವಾಡಿಗ, ಡಾ|  ಪ್ರಭಾಕರ ಶೆಟ್ಟಿ ಬಿ., ಎಸ್‌. ಕೆ. ಶ್ರೀಯಾನ್‌, ಹ್ಯಾರಿ ಸಿಕ್ವೇರ, ರಾಮಚಂದ್ರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ವತಿಯಿಂದ ಗೌರವವನ್ನು ಸ್ವೀಕರಿಸಿದ ಎಲ್‌. ವಿ. ಅಮೀನ್‌ ಅವರು ಎಲ್ಲರಿಗೂ ವಂದಿಸಿ ಕೃತಜ್ಞತೆ ಸಲ್ಲಿಸಿದರು. ಸಭಾ ಕಾರ್ಯಕ್ರಮವನ್ನು ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ ಅವರು ನಿರ್ವಹಿಸಿ , ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next