Advertisement
ಕೋರ್ಟ್ ಅಭಿಪ್ರಾಯ ಕೇಳಬೇಕೇ?ತಮಿಳುನಾಡು ಸರಕಾರವಾಗಲಿ, ಜಯಲಲಿತಾ ಸಂಬಂಧಿಗಳಾಗಲಿ ಕೋರ್ಟ್ನ ಈ ಸಲಹೆಯನ್ನು ಪಾಲಿಸಲೇಬೇಕು ಎಂದೇನಿಲ್ಲ. ಈಗಾಗಲೇ ಸರಕಾರ ಈ ಕಟ್ಟಡವನ್ನು ಅಧ್ಯಾದೇಶ ಮೂಲಕ ವಶಪಡಿಸಿಕೊಳ್ಳಲು ಮುಂದಾಗಿದೆ. ಆದರೆ ಈ ನಿವಾಸ ವಶಪಡಿಸಿಕೊಳ್ಳಲು, ತಮಿಳುನಾಡು ಸರಕಾರ ದೀಪಾ ಮತ್ತು ದೀಪಕ್ಗೆ 100 ಕೋಟಿ ರೂ.ನೀಡಬೇಕಾಗಿ ಬರಬಹುದು. ಕೋರ್ಟ್ನ ಪ್ರಶ್ನೆ ಜನರ ಈ ಪ್ರಮಾಣದ ಹಣವನ್ನು ಸ್ಮಾರಕಕ್ಕಾಗಿ ವೆಚ್ಚಮಾಡಬೇಕೇ ಎಂಬುದು.
ತೀರ್ಪಿನ ಸಂದರ್ಭದಲ್ಲಿ ಹೈಕೋರ್ಟ್, ಚೆನ್ನೈಯ ಪೋಯೆಸ್ ಗಾರ್ಡನ್ನಲ್ಲಿರುವ ಜಯಲಲಿತಾ ಅವರ ಅಧಿಕೃತ ನಿವಾಸ “ವೇದ ನಿಲಯಂ’ ಅನ್ನು ಸರಕಾರಿ ಸ್ಮಾರಕವನ್ನಾಗಿ ಮಾಡಬೇಕೇ ಎಂಬ ಬಗ್ಗೆ ಪುನರ್ ಪರಿಶೀಲನೆ ಮಾಡಿ ಎಂದು ತಮಿಳುನಾಡು ಸರಕಾರಕ್ಕೆ ಸಲಹೆ ನೀಡಿದೆ. ಈ ರೀತಿ ಖಾಸಗಿ ಕಟ್ಟಡಗಳನ್ನು ಜನರ ಹಣವನ್ನು ಬಳಕೆ ಮಾಡಿ ವಶಪಡಿಸಿಕೊಳ್ಳುವುದು ಸರಿಯಲ್ಲ. ಇದು ಮುಗಿಯದ ಪ್ರಕ್ರಿಯೆ. ಇದಕ್ಕೆ ಬದಲಾಗಿ ಇದೇ ನಿವಾಸವನ್ನು ಖಾಯಂ ಆಗಿ ಮುಖ್ಯಮಂತ್ರಿಗಳ ನಿವಾಸ ಮತ್ತು ಕಚೇರಿ ಮಾಡಿ ಎಂದು ಕೋರ್ಟ್ ಹೇಳಿದೆ.