Advertisement

ಜಯಚಂದ್ರ ನಾಲಿಗೆ ಸುಡುತ್ತೇವೆ: ಯತ್ನಾಳ್‌

06:50 AM Nov 11, 2018 | Team Udayavani |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಡುವ ಕಾಲ ಬಂದಿದೆ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರರ ನಾಲಿಗೆ ಸುಡಬೇಕಾಗುತ್ತದೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಪ್ರಬುದಟಛಿ ನಾಯಕ, ಅರೆ ಹುಚ್ಚರಾಗಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಚೋರ್‌ ಎಂದು ರಫೇಲ್‌ ಹಗರಣದ ಬಗ್ಗೆ ಅಂಕಿ-ಅಂಶವಿಲ್ಲದೇ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಕಾಂಗ್ರೆಸ್‌ನವರು ಬಾಯಿಗೆ ಬಂದಂತೆ ಮಾತನಾಡುವುದು ಬಿಡದಿದ್ದರೆ ನಾವು ಅವರಿಗಿಂತ ಕೆಟ್ಟದಾಗಿ ಮಾತನಾಡಬೇಕಾಗುತ್ತದೆ ಎಂದು ಯತ್ನಾಳ್‌ ಎಚ್ಚರಿಸಿದರು.

ಪ್ರಪಂಚವೇ ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಗುಳ್ಳೇ ನರಿ ಎಂದು ಕರೆದಿರುವ ಜಯಚಂದ್ರ ಒಂದು ಕೆಟ್ಟ ಸೊಳ್ಳೆ.ಪ್ರಧಾನಿಯನ್ನು ಸುಡುವ ಬಗ್ಗೆ ಮಾತನಾಡಿರುವ ಜಯಚಂದ್ರ ಅವರನ್ನು ಪೊಲೀಸರು ಬಂಧಿಸಿ,ಗಲ್ಲಿಗೇರಿಸಬೇಕು.
– ಸೊಗಡು ಎಸ್‌.ಶಿವಣ್ಣ,
ಬಿಜೆಪಿ ಹಿರಿಯ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next