Advertisement

ಕ್ವಾರಂಟೈನ್‌ ಕೇಂದ್ರಕ್ಕೆ ಅಜಯಸಿಂಗ್‌ ಭೇಟಿ

06:08 PM May 25, 2020 | Naveen |

ಜೇವರ್ಗಿ: ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಚೆನ್ನಾಗಿದ್ದರೆ ಮುಂದೆ ಗಳಿಸಬಹುದು, ಅನಾರೋಗ್ಯ ಪೀಡಿತರಾದರೆ ಜೀವನವೇ ವ್ಯರ್ಥವಾಗುತ್ತದೆ ಎಂದು ಶಾಸಕ ಡಾ| ಅಜಯಸಿಂಗ್‌ ಹೇಳಿದರು.

Advertisement

ತಾಲೂಕಿನ ಮಂದೇವಾಲ, ಯಡ್ರಾಮಿ ಪಟ್ಟಣದ ವಿವಿಧ ಕ್ವಾರಂಟೈನ್‌ ಕೇಂದ್ರಗಳಿಗೆ ರವಿವಾರ ಭೇಟಿ ನೀಡಿ, ಅವರು ಮಾತನಾಡಿದರು. ಕೋವಿಡ್ ಹೊಡೆದೋಡಿಸಲು ಪ್ರತಿಯೊಬ್ಬರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು. ಇದೆ ವೇಳೆ ಮಂದೇವಾಲ ವಸತಿ ನಿಲಯದ ಕ್ವಾರಂಟೈನ್‌ದಲ್ಲಿರುವ ಕೆಲವರು ಊಟ ಹಾಗೂ ಸೌಲಭ್ಯದ ಕುರಿತು ಶಾಸಕರ ಬಳಿ ಸಮಸ್ಯೆ ತೋಡಿಕೊಂಡರು. ಇದಕ್ಕೆ ಶಾಸಕರು ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಶಾಸಕರು ಯಡ್ರಾಮಿ ಹಾಗೂ ತಾಲೂಕಿನ ವಿವಿಧ ಕ್ವಾರಂಟೈನ್‌ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಮುಖಂಡರಾದ ಶಿವಪುತ್ರಪ್ಪ ಸಾಹು ಕೋರಿ, ಸಿದ್ಧಣ್ಣ ಗಡ್ಡದ್‌, ಗೊಲ್ಲಾಳಪ್ಪ ದ್ಯಾಮಗೊಂಡ, ಯಶವಂತರಾಯ ಗಾಣಿಗೇರ, ಬಹಾದ್ದೂರ ರಾಠೊಡ, ಸುರೇಶ ರಾಠೊಡ, ಕಾಶಿರಾಯಗೌಡ ಯಲಗೋಡ, ಶ್ರೀಶೈಲ ಬುಟ್ನಾಳ, ಪಿಎಸ್‌ಐ ಮಲ್ಲಣ್ಣ ಯಲಗೋಡ, ಮರೆಪ್ಪ ಸರಡಗಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next