Advertisement

“ಜಾವೆಲಿನ್‌ ತಾರೆ ನೀರಜ್‌ ನೆರವಿಗೆ ಸಿದ್ಧ’

06:00 AM Dec 27, 2018 | |

ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ, ಪ್ರಖ್ಯಾತ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ತರಬೇತಿಗೆ ಸೂಕ್ತ ನೆರವು ನೀಡುತ್ತಿಲ್ಲ ಎಂದು ಜರ್ಮನ್‌ ಮೂಲದ ತರಬೇತುದಾರ ಉವ್‌ ಹಾನ್‌ ಆರೋಪಿಸಿದ್ದು ಭಾರೀ ಸದ್ದು ಮಾಡಿತ್ತು. ಉಪಕರಣ ಕೊಳ್ಳಲಿಕ್ಕಾಗಲೀ, ವಿದೇಶಿ ಪ್ರವಾಸ ಮಾಡುವುದಕ್ಕಾಗಲೀ ಸಮಯಕ್ಕೆ ಸರಿಯಾಗಿ ನೆರವು ನೀಡುತ್ತಿಲ್ಲ ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಎಲ್ಲ ನೆರವು ನೀಡಲು ಸಿದ್ಧ ಎಂದು ತಿಳಿಸಿದ್ದಾರೆ. 

Advertisement

ನಾನು ಪ್ರತಿಯೊಬ್ಬರನ್ನೂ ಏನಾಗಿದೆ ಎಂದು ಕೇಳಿದ್ದೇನೆ. ಪ್ರತಿಯೊಬ್ಬರೂ ಅವರ ಅಭಿಪ್ರಾಯ ಹೇಳಿದ್ದಾರೆ. ನಾವು ಅಧಿಕಾರ ವರ್ಗದ ಪ್ರಕ್ರಿಯೆಗಳನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದ್ದೇನೆ. ಕೆಲವು ಸಮಸ್ಯೆಗಳನ್ನು ಕೇಂದ್ರ ಸಚಿವ ಸಂಪುಟಕ್ಕೆ ಒಯ್ಯಲು ನಿರ್ಧರಿಸಿದ್ದೇನೆಂದು ರಾಜ್ಯವರ್ಧನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next