Advertisement

ಜಸ್ವಿಂದರ್‌ ಸಿಂಗ್‌ ಮುಲ್ತಾನಿ ಪತ್ತೆಗೆ ಇಂಟರ್‌ಪೋಲ್‌ ಮೊರೆ

09:31 PM Feb 09, 2022 | Team Udayavani |

ನವದೆಹಲಿ: ಪಂಜಾಬ್‌ನ ಲೂಧಿಯಾನದಲ್ಲಿ ಇತ್ತೀಚೆಗೆ ನಡೆದಿದ್ದ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ, ಖಲಿಸ್ತಾನ್‌ ಪ್ರತ್ಯೇಕತಾವಾದಿ ಜಸ್ವಿಂದರ್‌ ಸಿಂಗ್‌ ಮುಲ್ತಾನಿಯ ಪತ್ತೆಗಾಗಿ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೊಳಿಸುವಂತೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಿದೆ.

Advertisement

ಪಂಜಾಬ್‌ ಪೊಲೀಸರು ಹಾಗೂ ಎನ್‌ಐಎ ದಾಖಲಿಸಿಕೊಂಡಿರುವ ಹಲವಾರು ಬುಡಮೇಲು ಕೃತ್ಯಗಳ ಪ್ರಕರಣಗಳ ಪ್ರಕಾರ, “ಜಸ್ವಿಂದರ್‌ ಸಿಂಗ್‌, ಖಲಿಸ್ತಾನ್‌ ಹೋರಾಟಗಾರರ ಪರವಾಗಿರುವ ಸಿಖ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಮುಖ್ಯಸ್ಥ ಗುರುಪತ್ವತ್‌ ಸಿಂಗ್‌ ಪನ್ನುವಿನ ನಿಕಟವರ್ತಿ. ಹಾಗಾಗಿ, ಜಸ್ವಿಂದರ್‌ ಬಂಧನಕ್ಕೆ ಸಹಾಯ ಮಾಡಬೇಕು’ ಎಂದು ಎನ್‌ಐಎ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next