Advertisement

ಮಕ್ಕಳಿಗಾಗಿ ಮಲ್ಲಿಗೆ ಕವಿ

12:30 AM Mar 17, 2019 | |

ಪಾಠಪುಸ್ತಕಗಳಲ್ಲಿ ಪ್ರಸಿದ್ಧ ಕವಿಗಳ ಪದ್ಯಗಳು ಇರುತ್ತವೆ. ಆದರೆ, ಅವುಗಳನ್ನು ಓದಿ ಮರೆತು ಬಿಡುವುದೇ ಹೆಚ್ಚು. ಕವಿಯನ್ನಾಗಲಿ, ಕವಿತೆಯನ್ನಾಗಲಿ ಮಕ್ಕಳ ಮಟ್ಟಕ್ಕೆ ಇಳಿದು ಪರಿಚಯಿಸುವ ಕೆಲಸ ಆಗಬೇಕಾಗಿದೆ. 

Advertisement

ಕೇವಲ ಶಾಲಾ ಪಾಠಗಳಿಗಷ್ಟೇ ಇದು ಸೀಮಿತವಾಗದೆ ನಿರಂತರವಾಗಿ ನಡೆಯಬೇಕಾಗಿದೆ. ಪ್ರಸ್ತುತ ಕೆ. ಎಸ್‌. ನರಸಿಂಹಸ್ವಾಮಿ ಟ್ರಸ್ಟ್‌ನ ಪ್ರಯೋಗ ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಕೆ.ಎಸ್‌. ನರಸಿಂಹ ಸ್ವಾಮಿಯವರ ಬದುಕನ್ನು ಕಥನ ಶೈಲಿಯಲ್ಲಿ ನಿರೂಪಿಸುತ್ತ, ಅವರ ಪದ್ಯಗಳನ್ನು ಸರಳವಾಗಿ ಪರಿಚಯಿಸುವ ಪ್ರಯತ್ನ ಇಲ್ಲಿದೆ. ಇದನ್ನು ಓದಿದ ಮಕ್ಕಳು ಕೆ.ಎಸ್‌. ನರಸಿಂಹಸ್ವಾಮಿಯವರ ಬೇರೆ ಪದ್ಯಗಳನ್ನು ಓದುವ ಆಸಕ್ತಿ ವಹಿಸಿದರೆ ಅಚ್ಚರಿಯಿಲ್ಲ. ನ. ರವಿಕುಮಾರ ಅವರ ಬರಹಕ್ಕೆ ಪ.ಸ. ಕುಮಾರ್‌ ಮತ್ತು ಕಿರಣ್‌ ಮಾಡಾಳು ಅವರ ರೇಖಾಚಿತ್ರಗಳ ಸಾಥಿಯಿದೆ.

– ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next