Advertisement

ಹಾಲಿನ ದರ ಏರಿಕೆ ಹೊಣೆ ಜಾರಕಿಹೊಳಿ ಹೆಗಲಿಗೆ

11:40 PM Jan 17, 2020 | Team Udayavani |

ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್) 14 ಒಕ್ಕೂಟಗಳ ಅಧ್ಯಕ್ಷರು ಒತ್ತಾಯಿಸಿದ್ದು, ದರ ಹೆಚ್ಚಳ ಜವಾಬ್ದಾರಿಯನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ವಹಿಸಿದ್ದಾರೆ. ದರ ಹೆಚ್ಚಳ ಕುರಿತು ಶುಕ್ರವಾರ ನಡೆದ ಕೆಎಂಎಫ್ ಆಡಳಿತ ಮಂಡಳಿತ ಮಂಡಳಿ ಸಭೆಯಲ್ಲಿ ಒಕ್ಕೂಟ ಅಧ್ಯಕ್ಷರು ಒಮ್ಮತದಿಂದಲೇ ಲೀಟರ್‌ಗೆ 2 ರಿಂದ 3 ರೂ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ.

Advertisement

ಜತೆಗೆ ಮುಖ್ಯಮಂತ್ರಿಗಳೊಡನೆ ಚರ್ಚೆ ಮಾಡಿ ದರ ಹೆಚ್ಚಳ ಮಾಡಿಸುವ ಹೊಣೆಯನ್ನು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಿದ್ದಾರೆ. ಹೀಗಾಗಿ, ಅಧ್ಯಕ್ಷರು ಶನಿವಾರ ಸಿಎಂ ಬಿ.ಎಸ್‌.ಯಡಿಯೂರಪ್ಪರನ್ನು ಭೇಟಿ ಮಾಡಿ ದರ ಹೆಚ್ಚಳ, ಎಷ್ಟು ರೂ. ಹೆಚ್ಚಳ ಕುರಿತು ಚರ್ಚಿಸಲಿದ್ದಾರೆ. ಈ ಚರ್ಚೆ ಬಳಿಕವೇ ಹಾಲಿನ ದರ ಹೆಚ್ಚಳ ಅಂತಿಮವಾಗಲಿದೆ. ಒಂದು ವೇಳೆ ಸಿಎಂ ಅನುಮತಿ ನೀಡದಿ ದ್ದರೆ ದರ ಹೆಚ್ಚಳ ಅಸಾಧ್ಯ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next