Advertisement

​​​​​​​ಜಪಾನ್‌ ಓಪನ್‌: ಕೆ. ಶ್ರೀಕಾಂತ್‌ಗೆ ಸೋಲು

06:00 AM Sep 15, 2018 | Team Udayavani |

ಟೋಕಿಯೊ: ಭಾರತದ ಶಟ್ಲರ್‌ಗಳು “ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಿಂದ ಬರಿಗೈಯಲ್ಲಿ ಮರಳುವ ಸಂಕಟಕ್ಕೆ ಸಿಲುಕಿದ್ದಾರೆ. ಅಂತಿಮ ಭರವಸೆಯಾಗಿದ್ದ ಕೆ. ಶ್ರೀಕಾಂತ್‌ ಶುಕ್ರವಾರದ ಮ್ಯಾರಥಾನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಕೊರಿಯಾದ ಲೀ ಡಾಂಗ್‌ ಕೆಯುನ್‌ಗೆ ಸೋಲುವ ಮೂಲಕ ಭಾರತದ ಹೋರಾಟ ಅಂತ್ಯ ಕಂಡಿತು.

Advertisement

ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್‌ಗೆ ಕೊರಿಯಾದ ಡಾಂಗ್‌ ಕೆಯುನ್‌ ವಿರುದ್ಧ ಮೊದಲ ಗೇಮ್‌ ಗೆದ್ದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಒಂದು ಗಂಟೆ, 19 ನಿಮಿಷಗಳ ಈ ಹೋರಾಟದಲ್ಲಿ ಡಾಂಗ್‌ ಕೆಯುನ್‌ 19-21, 21-16, 21-18 ಅಂತರದಿಂದ ವಶಪಡಿಸಿಕೊಂಡರು. ಈ ಮೂರೂ ಗೇಮ್‌ಗಳ ಅಂಕಗಳ ಅಂತರವನ್ನು ಗಮನಿಸಿದಾಗ ಪಂದ್ಯದ ತೀವ್ರತೆ ಅರಿವಾಗುತ್ತದೆ. ಕಳೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಶ್ರೀಕಾಂತ್‌, ಇದಕ್ಕೂ ಹಿಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ವೋಂಗ್‌ ವಿಂಗ್‌ ಕಿ ವಿನ್ಸೆಂಟ್‌ ವಿರುದ್ಧ ಏಶ್ಯನ್‌ ಗೇಮ್ಸ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಂತರ 21-15, 21-14.

ಏಶ್ಯಾಡ್‌ ಪದಕ ಗೆದ್ದ ಪಿ.ವಿ. ಸಿಂಧು, ಎಚ್‌.ಎಸ್‌. ಪ್ರಣಯ್‌ ಗುರುವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಸೋಲನುಭವಿಸಿದ್ದರು. ಸಿಂಧು ಚೀನದ ಗಾವೊ ಫ್ಯಾಂಜಿ ಅವರಿಗೆ 18-21, 21-19 ಅಂಕಗಳಿಂದ ಶರಣಾದರು. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ-ಬಿ.ಸುಮೀತ್‌ ರೆಡ್ಡಿ ಗುರುವಾರದ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲೇ ಎಡವಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next