Advertisement

ನಾರಾಯಣ ಗುರುಗಳ ಸ್ತಬ್ಧಚಿತ್ರ ಗೊಂದಲ: ಸಚಿವ ಕೋಟ ಅವರಿಂದ ಪೂಜಾರಿಗೆ ಮನವರಿಕೆ

01:07 AM Jan 25, 2022 | Team Udayavani |

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಕುರಿತು ಉಂಟಾಗಿರುವ ಗೊಂದಲದ ಹಿನ್ನೆಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ನಿಯೋಗ ಸೋಮವಾರ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು.

Advertisement

ಬಳಿಕ ಮಾತನಾಡಿದ ಸಚಿವರು, ಸ್ತಬ್ಧಚಿತ್ರದ ಕುರಿತು ಪ್ರಧಾನಿ ಹಾಗೂ ಕೇಂದ್ರ ಸರಕಾರದ ಕುರಿತು ಕೇರಳದ ಕಮ್ಯೂನಿಸ್ಟ್‌ ಸರಕಾರ ಸೇರಿದಂತೆ ರಾಜ್ಯದ ಕಾಂಗ್ರೆಸ್‌ ಮುಖಂಡರು ಮಾಡಿರುವ ಅಪಾದನೆಗಳು ಸಂಪೂರ್ಣ ಸುಳ್ಳು ಎಂಬುದನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ 15 ನಿಮಿಷಗಳ ಕಾಲ ಮಾತನಾಡಿದ್ದೇವೆ. ಗುರುಗಳು ಸ್ಥಾಪಿಸಿದ ಶಿವಗಿರಿ ಮಠವನ್ನು ಹಿಂದೆ ಕೇರಳ ಸರಕಾರ 5 ವರ್ಷಗಳ ಕಾಲ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಬಳಿಕ ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಶಿವಗಿರಿ ಮಠ ನಾರಾಯಣ ಗುರು ಟ್ರಸ್ಟ್‌ ಆಗಿ ಮುಂದುವರಿಯುತ್ತಿದೆ. 2015ರ ಡಿ. 15ಕ್ಕೆ ಪ್ರಧಾನಿಯವರು ಶಿವಗಿರಿಗೆ ಭೇಟಿ ಕೊಟ್ಟು ನಾರಾಯಣ ಗುರುಗಳ ಭಾವಚಿತ್ರ ಅನಾವರಣ, ಗುರುಗಳ ಕುರಿತು ಅವರು ಆಡಿ ರುವ ಮಾತುಗಳು, ಕೇಂದ್ರ ಪ್ರವಾ ಸೋದ್ಯಮ ಇಲಾಖೆಯಿಂದ 70 ಕೋ.ರೂ. ಬಿಡುಗಡೆ ಮಾಡಿ ಅಪೂರ್ವವಾಗಿರುವ ಕ್ಷೇತ್ರ ಆಗಬೇಕು ಎಂದಿರುವುದನ್ನು ಪೂಜಾರಿ ಅವರ ಗಮನಕ್ಕೆ ತಂದಿದ್ದೇವೆ ಎಂದರು.

ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ ನೇರ ಪ್ರಸಾರಕ್ಕೆ ದೂರದರ್ಶನ ಸಿದ್ಧತೆ : 59 ಕ್ಯಾಮೆರಾ, 160 ಸಿಬ್ಬಂದಿ

ಪೂಜಾರಿಯವರು ಬಹಳ ಪ್ರೀತಿ ಯಿಂದ ನಮ್ಮನ್ನು ನಡೆಸಿಕೊಂಡಿದ್ದಾರೆ ಹಾಗೂ “ನಿಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಜ. 26ರಂದು ಕುದ್ರೋಳಿ ಕ್ಷೇತ್ರದಲ್ಲಿ ನಡೆಯುವ ನಾರಾಯಣ ಗುರುಗಳ ಕುರಿತ ಸಮಾರಂಭಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಸೇರಿದಂತೆ ಇಡೀ ಬಿಜೆಪಿಯು ತಮ್ಮ ಕುರಿತು ವಿಶೇಷ ಗೌರವವನ್ನು ಹೊಂದಿದೆ ಎಂಬುದಾಗಿ ಅವರ ಗಮನಕ್ಕೆ ತಂದಿದ್ದೇವೆ ಎಂದರು.

ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪೂಜಾರಿ ಅವರ ಮುಂದೆ ವಸ್ತುಸ್ಥಿತಿಯನ್ನು ಇಟ್ಟಿದ್ದೇವೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ರವಿಶಂಕರ ಮಿಜಾರು, ಸತೀಶ್‌ ಕುಂಪಲ ಜತೆಗಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next