Advertisement

Jan.12: ಕರಾವಳಿಯಾದ್ಯಂತ “ಮಿಸ್ಟರ್‌ ಮದಿಮಯೆ’ ತುಳು ಸಿನೆಮಾ ತೆರೆಗೆ

12:37 AM Jan 10, 2024 | Team Udayavani |

ಮಂಗಳೂರು: ಎಂಎಂ ಗ್ರೂಫ್ಸ್ ಬ್ಯಾನರ್‌ನಡಿ ನಿರ್ಮಾಣವಾದ “ಮಿಸ್ಟರ್‌ ಮದಿಮಯೆ’ ತುಳು ಸಿನೆಮಾ ಜ.12ರಂದು ತೆರೆ ಕಾಣಲಿದೆ ಎಂದು ನಟ ಸಾಯಿಕೃಷ್ಣ ಕುಡ್ಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಿಸ್ಟರ್‌ ಮದಿಮಯೆ’
ಈ ಸಿನೆಮಾ ಮಂಗಳೂರಿನಲ್ಲಿ ಬಿಗ್‌ ಸಿನೆಮಾಸ್‌, ಸಿನೆಪೊಲಿಸ್‌, ಪಿವಿಆರ್‌, ಸುರತ್ಕಲ್‌ನಲ್ಲಿ ಸಿನೆಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಬಿಗ್‌ ಸಿನೆಮಾಸ್‌, ಉಡುಪಿ, ಪುತ್ತೂರಿನಲ್ಲಿ ಬಿಗ್‌ ಸಿನೆಮಾಸ್‌, ಬೆಳ್ತಂಗಡಿಯಲ್ಲಿ ಭಾರತ್‌, ಕಾರ್ಕಳದಲ್ಲಿ ರಾಧಿಕಾ ಹಾಗೂ ಪ್ಲಾನೆಟ್‌, ಸುಳ್ಯದಲ್ಲಿ ಸಂತೋಷ್‌ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಾಣಲಿದೆ. ಆದರೆ, ಉಡುಪಿಯ ಕಲ್ಪನಾ ಮತ್ತು ಮಂಗಳೂರಿನ ರೂಪವಾಣಿ ಥಿಯೇಟರ್‌ನಲ್ಲಿ ಸಿನೆಮಾ ಜ.19 ರಂದು ಬಿಡುಗಡೆಯಾಗಲಿದೆ ಎಂದರು.

ನವೀನ್‌ ಜಿ ಪೂಜಾರಿ ನಿರ್ದೇಶನದ ಈ ಸಿನೆಮಾದ ನಾಯಕನಾಗಿ ಸಾಯಿಕೃಷ್ಣ ಕುಡ್ಲ, ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್‌ ಪೂಜಾರಿ, ಜ್ಯೋತಿಷ್‌ ಶೆಟ್ಟಿ, ಸುನೀಲ್‌ ನೆಲ್ಲಿಗುಡ್ಡೆ, ಪಿಂಕಿ ರಾಣಿ ಮುಂತಾದವರು ಅಭಿನಯಿಸಿದ್ದಾರೆ.

ಮಿಥುನ್‌ ಕೆ.ಎಸ್‌. ನಿರ್ಮಾಪಕರು. ರಾಜೇಶ್‌ ಫೆರಾವೋ ಸಹ ನಿರ್ಮಾಪಕರು. ಕೆ.ಪಿ. ಮಿಲನ್‌ ಸಂಗೀತ, ಪ್ರಶಾಂತ್‌ ಧರ್ಮಸ್ಥಳ ಛಾಯಾಗ್ರಹಣವಿದೆ. ಮದುವೆ ಸಮಾರಂಭದ ಸುತ್ತ ನಡೆಯುವ ಕಥೆಗೆ ಹಾಸ್ಯದ ಲೇಪನ ಹಚ್ಚಲಾಗಿದೆ ಎನ್ನುತ್ತಾರೆ ನಿರ್ದೇಶಕ ನವೀನ್‌ ಪೂಜಾರಿ.

ಪತ್ರಿಕಾಗೋಷ್ಠಿಯಲ್ಲಿ ನಟರಾದ ಪ್ರಕಾಶ್‌ ಪಾಂಡೇಶ್ವರ್‌, ಶ್ವೇತಾ ಸುವರ್ಣ, ಸುನಿಲ್‌ ನೆಲ್ಲಿಗುಡ್ಡೆ, ನಿರ್ಮಾಪಕ ಮಿಥುನ್‌ ಕೆ.ಎಸ್‌, ಸಂಕಲನಕಾರ ಸುಜಿತ್‌ ನಾಯಕ್‌, ಮೆನೇಜರ್‌ ಹೆರಾಲ್ಡ್‌, ಸಂಗೀತ ನಿರ್ದೇಶಕ ಮಿಲನ್‌, ಚಿತ್ರ ವಿತರಕ ಸಚಿನ್‌ ಎ.ಎಸ್‌. ಉಪ್ಪಿನಂಗಡಿ, ರಾಜೇಶ್‌ ಫೆರಾವೋ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next