Advertisement

ಅಖನೂರ್‌ ವಲಯದಲ್ಲಿ ಪಾಕ್‌ ಕದನ ವಿರಾಮ ಉಲ್ಲಂಘನೆ

10:37 AM Mar 04, 2019 | udayavani editorial |

ಶ್ರೀನಗರ : ಪಾಕ್‌ ಸೇನೆ ಇಂದು ಸೋಮವಾರ ನಸುಕಿನ 3 ಗಂಟೆಯ ವೇಳೆ ಜಮ್ಮು ಕಾಶ್ಮೀರದ ಅಖನೂರ್‌ ವಲಯದಲ್ಲಿ ಕದನ ವಿರಾಮ ಉಲ್ಲಂಘನೆ ಗೈದಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.

Advertisement

ಭಾರತೀಯ ಮೂಂಚೂಣಿ ಹೊರ ಠಾಣೆಗಳನ್ನು ಗುರಿ ಇರಿಸಿ ಪಾಕ್‌ ಪಡೆಗಳು ಫೈರಿಂಗ್‌ ಮತ್ತು ಮೋರ್ಟಾರ್‌ ಶೆಲ್ಲಿಂಗ್‌ ನಡೆಸಿವೆ. ಭಾರತೀಯ ಪಡೆಗಳು ಪಾಕ್‌ ಗುಂಡಿನ ದಾಳಿ ಜಬರ್‌ದಸ್ತ್ ಉತ್ತರ ನೀಡಿ ಪಾಕ್‌ ಗನ್‌ಗಳು ಮೌನ ವಹಿಸುವಂತೆ ಮಾಡಿವೆ ಎಂದು ವರದಿಗಳು ತಿಳಿಸಿವೆ.

ಕನಿಷ್ಠ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಕಳೆದ ಫೆ.27ರಂದು ಎಲ್‌ಓಸಿ ದಾಟಿ ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೈಶ್‌ ಉಗ್ರ ಶಿಬಿರಗಳನ್ನು ಧ್ವಂಸಗೈದ ಬಳಿಕದಲ್ಲಿ ಪಾಕ್‌ ಕದನ ವಿರಾಮ ತೀವ್ರಗೊಂಡಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next