Advertisement

ಜಮ್ಮು-ಕಾಶ್ಮೀರದ ಬಿಜೆಪಿ ಯುವ ನಾಯಕನ ಹತ್ಯೆ

07:40 AM Nov 03, 2017 | Team Udayavani |

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಬಿಜೆಪಿ ಯುವ ನಾಯಕ ಗೌಹಾರ್‌ ಹುಸೇನ್‌ ಭಟ್‌(30) ಎಂಬಾತನನ್ನು ಉಗ್ರರು ಗುರುವಾರ ಹತ್ಯೆಗೈದಿದ್ದಾರೆ. 

Advertisement

ಕಿಲೂರಾದ ಪೊದೆಯೊಂದರಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಇವರು ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷರಾಗಿದ್ದರು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಇದೇ ವೇಳೆ, ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಸೇನೆಯ ಗಸ್ತು ಪಡೆಯ ಮೇಲೆ ಪಾಕಿಸ್ತಾನಿ ರೇಂಜರ್‌ಗಳು ಗುಂಡಿನ ದಾಳಿ ನಡೆಸಿದ್ದು, ಬಿಎಸ್‌ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಇದಕ್ಕೆ ಯೋಧರು ಪ್ರತಿದಾಳಿ ನಡೆಸಿ, ಪಾಕಿಸ್ಥಾನದ 3 ಸೇನಾ ಶಿಬಿರಗಳಿಗೆ ಹಾನಿಯುಂಟಾಗಿ, ಪಾಕ್‌ನ ಇಬ್ಬರು ರೇಂಜರ್‌ಗಳು ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next