Advertisement

ಕ್ರೂರವಾಗಿ ರೇಪ್‌ ಮಾಡಿ, ಕಣ್ಣುಗಳನ್ನು ಕಿತ್ತು ತೆಗೆದರು

06:00 AM Sep 06, 2018 | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಥುವಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಂದ ಘಟನೆಗಿಂತ ಭೀಕರ, ಹೀನ ಕೃತ್ಯ ಬೆಳಕಿಗೆ ಬಂದಿದೆ. ಕಣಿವೆ ರಾಜ್ಯದ ಉರಿಯಿಂದ ಆ.23ರಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಸೆ.2ರಂದು ಬಾರಾಮುಲ್ಲಾ ಜಿಲ್ಲೆಯ ಕಾಡಿನಲ್ಲಿ ಪತ್ತೆಯಾಗಿದೆ. ಆಕೆಯ ಮೇಲೆ ಎಸಗಲಾಗಿರುವ ಕ್ರೂರತೆಯ ಪರಾಕಾಷ್ಠೆ ಹೇಗಿದೆ ಎಂದರೆ ಚೂರಿಯಿಂದ ಕಣ್ಣುಗಳನ್ನು ಕಿತ್ತು ತೆಗೆಯಲಾಗಿದೆ. ಆಕೆಯ ದೇಹದ ಖಾಸಗಿ ಭಾಗಕ್ಕೆ ಆ್ಯಸಿಡ್‌ ಹಾಕಿ ಕ್ರೌರ್ಯ ಮೆರೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ ತಾಯಿ, ಮಲ ಸಹೋದರ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಹೇಯ ಕೃತ್ಯದ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.

Advertisement

ಅವರನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅಸುನೀಗಿದ ಬಾಲಕಿಯ ತಾಯಿಗೆ ಪತಿಯ 2ನೇ ಪತ್ನಿ ಮತ್ತು ಮಕ್ಕಳ ವಿರುದ್ಧ ಸೇಡು ಇತ್ತು. ಹೀಗಾಗಿ ಬಾಲಕಿಯನ್ನು ಮುಗಿಸುವ ಯೋಚನೆ ರೂಪಿಸಲಾಗಿತ್ತು. ಅದರಂತೆ 14 ವರ್ಷದ ಮಲ ಸಹೋದರನೇ ಕರುಣೆಯಿಲ್ಲದೆ ಸ್ನೇಹಿತರ ಜತೆ ಸೇರಿ ಅತ್ಯಾಚಾರವೆಸಗಿದ್ದ. ಈ ಸಂದರ್ಭದಲ್ಲಿ ಮಲ ತಾಯಿಯೇ ಖುದ್ದು ವೀಕ್ಷಿಸುತ್ತಿದ್ದಳು ಎಂಬ ವಿಚಾರ ಬಹಿರಂಗವಾಗಿದೆ. ಅತ್ಯಂತ ಆಘಾತಕಾರಿ ವಿಚಾರವೆಂದರೆ ಮಲ ತಾಯಿಯೇ ಕೊನೆಯಲ್ಲಿ ಕತ್ತು ಹಿಸುಕಿ ಬಾಲಕಿಯನ್ನು ಹತ್ಯೆ ಮಾಡಿದ್ದಾಳೆ. ಉಳಿದವರು ಆ್ಯಸಿಡ್‌ ಅನ್ನು ಬಾಲಕಿಯ ದೇಹದ ಖಾಸಗಿ ಭಾಗ, ಇತರ ಅಂಗಾಗಗಳಿಗೆ ಆ್ಯಸಿಡ್‌ ಎರಚಿದ್ದಾರೆ ಎಂದು ಬಾರಾಮುಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಮಿ¤ಯಾಜ್‌ ಹುಸೇನ್‌ ಮಿರ್‌ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಚೂರಿ, ಆ್ಯಸಿಡ್‌ ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಥುವಾ ಅತ್ಯಾಚಾರಕ್ಕೆ ಗಲಾಟೆ ಎಬ್ಬಿಸಿದ ರಾಜಕೀಯ ಪಕ್ಷಗಳು ಅದಕ್ಕಿಂತ ಭೀಕರ ಹೇಯ ಕೃತ್ಯಕ್ಕೆ ಮೌನವಾಗಿಯೇ ಉಳಿದಿವೆ.

ಸೇಡು ಪ್ರಮುಖ ಕಾರಣ
ಅಸುನೀಗಿದ ಬಾಲಕಿ ಮತ್ತೂಬ್ಬ ಪತ್ನಿಯ ಪುತ್ರಿಯಾಗಿದ್ದಾಳೆ. ಪತಿ ಅವಳ ಜತೆಗೆ ಹೆಚ್ಚು ಕಾಲ ಕಳೆಯುತ್ತಾರೆ. ಅದರಿಂದ ರೊಚ್ಚಿಗೆದ್ದು ಈ ಕೃತ್ಯವೆಸಗಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಇಮ್ತಿಯಾಜ್‌ ಹುಸೇನ್‌ ಹೇಳಿದ್ದಾರೆ. ಬಾಲಕಿಯ ಮತ್ತೂಬ್ಬ ಪತ್ನಿ ಜಾರ್ಖಂಡ್‌ ಮೂಲದವರಾಗಿದ್ದಾರೆ. ಮನೆಯಿಂದ ಒಂದು ಕಿಮೀ ದೂರದಲ್ಲಿರುವ ಸ್ಥಳದಲ್ಲಿ ಅಸುನೀಗಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಸ್ನೇಹಿತರೊಂದಿಗೆ ಅತ್ಯಾಚಾರ ಎಸಗಿದ ಬಳಿಕ ಶವವನ್ನು ಸೊಪ್ಪು ಮತ್ತಿತರ ವಸ್ತುಗಳಿಂದ ಮುಚ್ಚಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next