Advertisement
ಅವರನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅಸುನೀಗಿದ ಬಾಲಕಿಯ ತಾಯಿಗೆ ಪತಿಯ 2ನೇ ಪತ್ನಿ ಮತ್ತು ಮಕ್ಕಳ ವಿರುದ್ಧ ಸೇಡು ಇತ್ತು. ಹೀಗಾಗಿ ಬಾಲಕಿಯನ್ನು ಮುಗಿಸುವ ಯೋಚನೆ ರೂಪಿಸಲಾಗಿತ್ತು. ಅದರಂತೆ 14 ವರ್ಷದ ಮಲ ಸಹೋದರನೇ ಕರುಣೆಯಿಲ್ಲದೆ ಸ್ನೇಹಿತರ ಜತೆ ಸೇರಿ ಅತ್ಯಾಚಾರವೆಸಗಿದ್ದ. ಈ ಸಂದರ್ಭದಲ್ಲಿ ಮಲ ತಾಯಿಯೇ ಖುದ್ದು ವೀಕ್ಷಿಸುತ್ತಿದ್ದಳು ಎಂಬ ವಿಚಾರ ಬಹಿರಂಗವಾಗಿದೆ. ಅತ್ಯಂತ ಆಘಾತಕಾರಿ ವಿಚಾರವೆಂದರೆ ಮಲ ತಾಯಿಯೇ ಕೊನೆಯಲ್ಲಿ ಕತ್ತು ಹಿಸುಕಿ ಬಾಲಕಿಯನ್ನು ಹತ್ಯೆ ಮಾಡಿದ್ದಾಳೆ. ಉಳಿದವರು ಆ್ಯಸಿಡ್ ಅನ್ನು ಬಾಲಕಿಯ ದೇಹದ ಖಾಸಗಿ ಭಾಗ, ಇತರ ಅಂಗಾಗಗಳಿಗೆ ಆ್ಯಸಿಡ್ ಎರಚಿದ್ದಾರೆ ಎಂದು ಬಾರಾಮುಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಮಿ¤ಯಾಜ್ ಹುಸೇನ್ ಮಿರ್ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಚೂರಿ, ಆ್ಯಸಿಡ್ ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಥುವಾ ಅತ್ಯಾಚಾರಕ್ಕೆ ಗಲಾಟೆ ಎಬ್ಬಿಸಿದ ರಾಜಕೀಯ ಪಕ್ಷಗಳು ಅದಕ್ಕಿಂತ ಭೀಕರ ಹೇಯ ಕೃತ್ಯಕ್ಕೆ ಮೌನವಾಗಿಯೇ ಉಳಿದಿವೆ.
ಅಸುನೀಗಿದ ಬಾಲಕಿ ಮತ್ತೂಬ್ಬ ಪತ್ನಿಯ ಪುತ್ರಿಯಾಗಿದ್ದಾಳೆ. ಪತಿ ಅವಳ ಜತೆಗೆ ಹೆಚ್ಚು ಕಾಲ ಕಳೆಯುತ್ತಾರೆ. ಅದರಿಂದ ರೊಚ್ಚಿಗೆದ್ದು ಈ ಕೃತ್ಯವೆಸಗಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಹುಸೇನ್ ಹೇಳಿದ್ದಾರೆ. ಬಾಲಕಿಯ ಮತ್ತೂಬ್ಬ ಪತ್ನಿ ಜಾರ್ಖಂಡ್ ಮೂಲದವರಾಗಿದ್ದಾರೆ. ಮನೆಯಿಂದ ಒಂದು ಕಿಮೀ ದೂರದಲ್ಲಿರುವ ಸ್ಥಳದಲ್ಲಿ ಅಸುನೀಗಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಸ್ನೇಹಿತರೊಂದಿಗೆ ಅತ್ಯಾಚಾರ ಎಸಗಿದ ಬಳಿಕ ಶವವನ್ನು ಸೊಪ್ಪು ಮತ್ತಿತರ ವಸ್ತುಗಳಿಂದ ಮುಚ್ಚಲಾಗಿತ್ತು.