Advertisement

ಸುಪ್ರೀಂ ಅಯೋಧ್ಯೆ ತೀರ್ಪಿನ ವಿರುದ್ಧ ಜಾಮಿಯತ್ ಉಲೇಮಾ ಹಿಂದ್ ಪುನರ್ ಪರಿಶೀಲನಾ ಅರ್ಜಿ ದಾಖಲು

09:56 AM Dec 03, 2019 | Team Udayavani |

ನವದೆಹಲಿ: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ಅಂತಿಮ ತೀರ್ಪನ್ನು ಪ್ರಶ್ನಿಸಿ ಜಾಮಿಯತ್ ಉಲೇಮಾ ಎ ಹಿಂದ್ ಸೋಮವಾರ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ.

Advertisement

ಅಯೋಧ್ಯೆ ಭೂ ವಿವಾದದ ಮೂಲ ಹೋರಾಟಗಾರ ಎಂ. ಸಿದ್ಧಿಖಿ ಅವರ ಕಾನೂನು ಉತ್ತರಾಧಿಕಾರಿಯಾಗಿರುವ ಮೌಲಾನಾ ಸೈಯದ್ ಅಶ್ಸಾದ್ ರಶೀದಿ ಮೇಲ್ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.

ಅಯೋಧ್ಯೆ ತೀರ್ಪಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಹಲವು ಜನರಿಗೆ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಇದೀಗ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿರುವುದರ ಉದ್ದೇಶ ಕೇವಲ ಗೌರವದ ಪ್ರಶ್ನೆಯಲ್ಲ, ಆದರೆ ಇದೊಂದು ಧಾರ್ಮಿಕ ವಿಚಾರವಾಗಿದೆ ಎಂದು ಜಾಮಿಯತ್ ಉಲೇಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಎಎನ್ ಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next