Advertisement

ವಿ.ಸಿ.ನಾಲೆಗೆ ಇಳಿದ ಐವರು ಜಲ ಸಮಾಧಿ

10:19 PM Apr 25, 2023 | Team Udayavani |

ಮಂಡ್ಯ: ತಾಲೂಕಿನ ಬಸರಾಳು ಸಮೀಪದ ದೊಡ್ಡ ಕೊತ್ತಗೆರೆ ಬಳಿ ನೀರಿನಲ್ಲಿ ಆಟವಾಡಲು ವಿ.ಸಿ.ನಾಲೆಗೆ ಇಳಿದ ಐವರು ಜಲ ಸಮಾಧಿಯಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ. ಮೂಲತಃ ಬೆಂಗಳೂರಿನ ನೀಲಸಂದ್ರದ ನಿವಾಸಿಗಳಾದ ಹನ್ಸಿಯಾ ಬೇಗಂ(34), ತಸ್ಮಿಯಾ(22), ಮಹತಾಬ್‌(10) ಹತೀಕಾ(30) ಅರ್ಷಕ್‌(12) ನೀರು ಪಾಲಾದ ದುರ್ದೈವಿಗಳು.

Advertisement

8 ಜನರ ತಂಡ 2 ಕಾರುಗಳಲ್ಲಿ ದೊಡ್ಡ ಕೊತ್ತಗೆರೆ ಗ್ರಾಮದ ನಾಲೆ ಬಳಿ ನೀರಿನಲ್ಲಿ ಆಟವಾಡಲು ತೆರಳಿದ್ದಾರೆ. ಈ ವೇಳೆ ಮಗುವೊಂದು ಕಾಲು ಜಾರಿ ನಾಲೆಗೆ ಬಿದ್ದಿದೆ. ಮಗು ರಕ್ಷಿಸಲು ಸ್ಥಳದಲ್ಲಿದ್ದ ಮೂವರು ಒಬ್ಬೊಬ್ಬರಾಗಿ ನಾಲೆಯ ಆಳ ತಿಳಿಯದೆ ಧುಮುಕಿದ್ದಾರೆ. ಅವರು ಕೊಚ್ಚಿ ಹೋಗುತ್ತಿದ್ದಾಗ ಮತ್ತಿಬ್ಬರು ನಾಲೆಗೆ ಜಿಗಿದಾಗ ನಾನು ಇಬ್ಬರನ್ನು ರಕ್ಷಿಸಿದೆ. ಉಳಿದ ಐವರು ನೀರಿನಲ್ಲಿ ಕೊಚ್ಚಿ ಹೋದರೆಂದು ಜೊತೆಯಲ್ಲಿದ್ದ ಸೈಯದ್‌ ಅಮೀರ್‌ ಮಾಧ್ಯಮಗಳಿಗೆ ತಿಳಿಸಿದರು.

ಮೂವರ ಶವ ಪತ್ತೆಯಾಗಿದ್ದು, ಉಳಿದಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸಂಜೆಯವರೆಗೂ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಲೆಯಲ್ಲಿ ನೀರಿನ ಹರಿವು ಕಡಿಮೆಗೊಳಿಸಿ ಕಾರ್ಯಾಚರಣೆ ಮಾಡಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next