Advertisement

ಪ್ರಖ್ಯಾತ ಪ್ರವಚನಕಾರ, ಜೈನ ಮುನಿ ತರುಣ್‌ ಸಾಗರ್‌ ಜಿನೈಕ್ಯ 

08:45 AM Sep 01, 2018 | |

ಹೊಸದಿಲ್ಲಿ : ಜೈನ ಮುನಿ, ಪ್ರಖ್ಯಾತ ಪ್ರವಚನಕಾರರಾದ ತರುಣ್‌ ಸಾಗರ್‌ ಜಿ ಮಹಾರಾಜ್‌  ಅವರು ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. 

Advertisement

ಸಲ್ಲೇಖನ ವೃತ(ಸಾಯುವವರೆಗೆ ಕಠಿಣ ಉಪವಾಸ) ನಿರತರಾಗಿದ್ದ ಅವರು ಬೆಳಗ್ಗೆ 3.18 ಗಂಟೆಯ ವೇಳೆಗೆ ಪೂರ್ವ ದೆಹಲಿಯಲ್ಲಿರುವ ಜೈನ ದೇಗುಲದಲ್ಲಿ ಮುನಿಗಳು, ಭಕ್ತರ ನಡುವೆ  ಕೊನೆಯುಸಿರೆಳೆದಿದ್ದಾರೆ. 

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ  ಅವರು ಕಾಮಾಲೆ ಮತ್ತು ಇತರ ಸಮಸ್ಯೆಗಳಿಗೂ ಗುರಿಯಾಗಿದ್ದರು. ಆರೋಗ್ಯ ಗಂಭೀರ ಸ್ವರೂಪಕ್ಕೆ  ತಲುಪಿದರೂ ತರುಣ್‌ ಸಾಗರ್‌ ಅವರು ಆಸ್ಪತ್ರೆಗೆ ತೆರಳಲು ಒಪ್ಪಿರಲಿಲ್ಲ. 

ದಿಗಂಬರ ಜೈನ ಪ್ರವಚನಕಾರರಾಗಿದ್ದ ಅವರಿಗೆ ದೇಶಾದ್ಯಂದ ಅಪಾರ ಅಭಿಮಾನಿಗಳಿದ್ದರು. 

ಅವರ ಅಂತಿಮ ವಿಧಿ ವಿಧಾನಗಳು ಇಂದು ಸಂಜೆ ಉತ್ತರ ಪ್ರದೇಶದ ಮುರದ್‌ನಗರದಲ್ಲಿರುವ ತರುಣ್‌ ಸಾಗರಮ್‌ನಲ್ಲಿ ನಡೆಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next